ಎಂ ಕೆ ಝವುರಾಬಿ ಪೇರಡ್ಕ
ಸುಳ್ಯ, ಮಾ. 30: ಪೇರಡ್ಕದ ಕೃಷಿಕರಾಗಿದ್ದ ಟಿ.ಎಂ ಅಹಮ್ಮದ್ ಕುಂಞಿ ಅವರ ಪತ್ನಿ ಹಾಗೂ ಪ್ರಸಿದ್ಧ ತುಂಬೆ ಕಾನಮಾರ್ ಮುಳಿಪಡ್ಪು ದಿ. ಅಬ್ದುಲ್ ಖಾದರ್ ಹಾಜಿಯವರ ಪುತ್ರಿ ಎಂ ಕೆ ಝವುರಾಬಿ (70) ಅಲ್ಪಕಾಲದ ಅಸೌಖ್ಯದಿಂದ ಕುಂಜತ್ತೂರ್ ನ ತನ್ನ ಪುತ್ರನ ಮನೆಯಲ್ಲಿ ನಿಧನರಾದರು.
ಇತ್ತೀಚೆಗೆ ಉಮ್ರಾ ಯಾತ್ರೆ ಕೈಗೊಂಡ ಸಂದರ್ಭದಲ್ಲಿ ಅನಾರೋಗ್ಯಕೀಡಾಗಿದ್ದರು. ಇವರ ಪತಿ ಟಿ ಎಂ ಅಹಮ್ಮದ್ ಕುಂಞ ತೆಕ್ಕಿಲ್ ರವರು ಪೇರಡ್ಕ ಮುಹಿದ್ದೀನ್ ಜುಮಾ ಮಸೀದಿ ಮತ್ತು ಪೇರಡ್ಕ ವಲಿಯುಲ್ಲಾಯಿ ದರ್ಗಾ ಶರೀಫ್ ಗೆ ಸ್ಥಳವನ್ನು ನೀಡಿದ್ದರು. ಅಲ್ಲದೇ ಮಸೀದಿಯ ಎಲ್ಲಾ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಿದ್ದರು.
ಪುತ್ರರಾದ ಟಿ ಎಂ ಬಶೀರ್, ಟಿ ಎಂ ಅಬ್ದುಲ್ ಖಾದರ್,ಟಿ ಎಂ ಮುಸ್ತಫಾ,ಟಿ ಎಂ ಆರೀಫ್, ಟಿ ಎಂ ಶಾಫಿ ,ಪುತ್ರಿ, ಅಳಿಯಾ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕೆ ಪಿ ಸಿ ಸಿ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ , ಡಾ. ಅಬ್ದುಲ್ ಮಜೀದ್ ಸಹಿತ ಹಲವಾರು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು. ತುಂಬೆ ವಳವೂರು ಜುಮಾ ಮಸೀದಿಯ ವಠಾರದಲ್ಲಿ ದಫನ ಮಾಡಲಾಯಿತು.