ಕೊರಗ ಪೂಜಾರಿ

Update: 2018-03-31 16:46 GMT

ಕುಂದಾಪುರ, ಮಾ.31: ಸಿಪಿಐ(ಎಂ) ಕುಂದಾಪುರ ತಾಲೂಕು ಸಮಿತಿಯ ಮುಖಂಡ ಕೊರಗ ಪೂಜಾರಿ ಯಾನೆ ಬಚ್ಚು ಪೂಜಾರಿ(82) ಮಾ.29ರಂದು ಕುಂದಾಪುರ ಹುಂಚಾರುಬೆಟ್ಟಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

1965-70ರ ದಶಕದಲ್ಲಿ ಹಂಚು ಕಾರ್ಮಿಕರ ಹೋರಾಟದಲ್ಲಿ ಸಕ್ರೀಯ ರಾಗಿದ್ದ ಇವರು ಈ ಸಂಘಟನೆಯ ಉಪಾದ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ರೈತ ಸಂಘಟನೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದ ಇವರು, ಸಿಪಿಎಂ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದರು.

ಮೃತರು ಐವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಸಿಪಿಎಂ ಹುಂಚಾರುಬೆಟ್ಟಿನ ಬಿ.ಸಿ.ರಸೆ್ತ ಶಾಖೆಯು ಸಂತಾಪ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ