ರಾಹುಲ್ ಒಬ್ಬ ಅಪ್ರಬುದ್ಧ ನಾಯಕ: ಪ್ರಹ್ಲಾದ್ ಜೋಶಿ
Update: 2018-04-09 16:02 GMT
ಹುಬ್ಬಳ್ಳಿ, ಎ.9: ಎಐಸಿಸಿ ಅಧ್ಯಕ್ಷ ರಾಹುಲ್ಗಾಂಧಿ ಒಬ್ಬ ಅಪ್ರಬುದ್ಧ ನಾಯಕ. ಅಂತಹವರನ್ನು ರಾಜ್ಯಕ್ಕೆ ಕರೆತಂದು ಪ್ರಚಾರ ಮಾಡಿಸುತ್ತಿದ್ದಾರೆ. ಅಲ್ಪಸಂಖ್ಯಾತರ ತುಷ್ಠಿಗಾಗಿ ಆರೆಸ್ಸೆಸ್ ಅನ್ನು ತೆಗೆಳುತ್ತಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಹಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ಗಾಂಧಿ ಕುಟುಂಬದವರೂ ಆರೆಸ್ಸೆಸ್ ಅನ್ನು ಸರ್ವನಾಶ ಮಾಡಲು ಮುಂದಾಗಿದ್ದರು ಎಂದ ಅವರು, ದೇಶದಲ್ಲಿ ಜನರು ಕಾಂಗ್ರೆಸ್ ಅನ್ನು ತೊಡೆದು ಹಾಕಿದ್ದಾರೆ. ಕಾಂಗ್ರೆಸ್ ದೇಶವನ್ನು ವಿಭಜನೆ ಮಾಡಿದ ನಂತರ, ಈಗ ಹಿಂದೂ-ಮುಸ್ಲಿಮರನ್ನು ವಿಭಜನೆ ಮಾಡಿದೆ. ಇದೀಗ ಮತ್ತೊಂದು ಸಮುದಾಯವನ್ನು ಒಡೆಯಲು ಮುಂದಾಗಿದೆ ಎಂದು ಜೋಶಿ ಆರೋಪ ದೂರಿದರು.