ಅಬ್ದುಲ್ ಜಬ್ಬಾರ್ ಶಿಹಾಬ್ ತಂಙಳ್

Update: 2018-04-11 14:29 GMT

ಮಲಪ್ಪುರಂ, ಎ. 11 : ಖ್ಯಾತ ಧಾರ್ಮಿಕ ವಿದ್ವಾಂಸ ಕೇರಳ ಸಂಸ್ಥಾನ ಜಂಈಯ್ಯತ್ತುಲ್ ಉಲಮಾ ಕಾರ್ಯದರ್ಶಿಯೂ ಆಗಿದ್ದ ಸಯ್ಯಿದ್ ಅಬ್ದುಲ್ ಜಬ್ಬಾರ್ ಶಿಹಾಬ್ ತಂಙಳ್ (60) ನಿಧನರಾಗಿದ್ದಾರೆ. ಮಂಗಳವಾರ ಮಲಪ್ಪುರಂ ಜಿಲ್ಲೆಯ ಪಟ್ಟರ್ಕಡವ್ ನಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಸೈಯದ್ ಕೆ.ಎಂ.ಎಸ್. ಅಬ್ದುಲ್ ಕಹ್ಹಾರ್ ಪೂಕೋಯ ತಂಙಳ್ ಅವರ ಸುಪುತ್ರರಾಗಿರುವ ಅವರು ವಂಡೂರು ಜಾಮಿಅ ವಹಬಿಯಾ ಅರಬಿಕ್ ಕಾಲೇಜು, ಮಂಜೇರಿ ದಾರುಸ್ಸುನ್ನ ಅರಬಿಕ್ ಕಾಲೇಜು, ನಾದಾಪುರ ಫಲಾಹಿಯಾ ಅರಬಿಕ್ ಕಾಲೇಜು ಸಹಿತ ಕೇರಳದ ಹಲವು ಪ್ರಸಿದ್ಧ ಅರಬಿಕ್ ಕಾಲೇಜುಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೇರಳ ಸುನ್ನಿ ಯುವಜನ ಫೆಡರೇಶನ್ (ಎಸ್‍ವೈಎಫ್) ಇದರ ಚೆಯರ್‍ಮೆನ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ