ಅಡ್ವಾಣಿ ಸ್ಥಿತಿಯೇ ಯಡಿಯೂರಪ್ಪರಿಗೂ ಬರಲಿದೆ: ರಾಮಲಿಂಗಾರೆಡ್ಡಿ

Update: 2018-04-30 14:56 GMT

ಬೆಂಗಳೂರು, ಎ.30: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬರುತ್ತಿದಂತೆಯೇ, ಬಿಜೆಪಿಯಿಂದಲೇ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೇಟ್ ಪಾಸ್ ನೀಡಲಿದ್ದು, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರ ಸ್ಥಿತಿಯೇ ಯಡಿಯೂರಪ್ಪಗೂ ಬರಲಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬರುತ್ತಿದಂತೆಯೇ, ಬಿಜೆಪಿಯಿಂದಲೇ ಬಿ.ಎಸ್.ಯಡಿಯೂರಪ್ಪ ಅವರನ್ನು ಗೇಟ್ ಪಾಸ್ ನೀಡಲಿದ್ದು, ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಅವರ ಸ್ಥಿತಿಯೇ ಯಡಿಯೂರಪ್ಪಗೂ ಬರಲಿದೆ ಎಂದಿದ್ದಾರೆ.

ಚುನಾವಣೆ ಗೆಲ್ಲಲು ಕೇಂದ್ರ ಸರಕಾರವು ಸಿಬಿಐ, ಐಟಿ ಸೇರಿ ಎಲ್ಲವನ್ನೂ ದುರುಪಯೋಗಪಡಿಸಿಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಂಜೇಗೌಡರ ಸಂಭಾಷಣೆ ವೈರಲ್ ಆಗಿದ್ದು, ಬಿಜೆಪಿ ದೂರವಾಣಿ ಕದ್ದಾಲಿಕೆಗೆ ಸಾಕ್ಷಿಯಾಗಿದೆ ಎಂದರು.

ಚುನಾವಣೆ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳಿಂದ ಹಿಡಿದು ಬ್ಲಾಕ್‌ಕಾಂಗ್ರೆಸ್‌ನ ಪದಾಧಿಕಾರಿಗಳ ಮನೆ ಮೇಲೂ ಐಟಿ ದಾಳಿ ಮಾಡುತ್ತಿದ್ದಾರೆ. ಅವರು ಎಷ್ಟೇ ಕುತಂತ್ರ ಮಾಡಿದರೂ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಅತ್ಯಾಚಾರದ ತರಬೇತಿಗೆ ಆದಿತ್ಯನಾಥ್
ಉತ್ತರಪ್ರದೇಶದಲ್ಲಿ ತಮ್ಮದೇ ಪಕ್ಷದ ಶಾಸಕರು ಅತ್ಯಾಚಾರ ಮಾಡಿದ್ದರೆ ಅವರಿಗೆ ರಕ್ಷಣೆ ನೀಡಿದ್ದಾರೆ. ಅದರ ವಿರುದ್ದ ನ್ಯಾಯ ಕೇಳಿದ ಸಂತ್ರಸ್ತೆಯ ತಂದೆಯನ್ನು ಲಾಕಪ್‌ನಲ್ಲಿಯೇ ಇಲ್ಲವಾಗಿಸಿದ್ದಾರೆ. ಇದೀಗ ರಾಜ್ಯದಲ್ಲೂ ತಮ್ಮ ನಾಯಕರಿಗೆ ಅತ್ಯಾಚಾರ ಮಾಡಿ ಬಚಾವಾಗುವ ತರಬೇತಿ ನೀಡಲು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರಾಜ್ಯಕ್ಕೆ ಆಗಮಿಸಲಿದ್ದಾರೆ.
-ರಾಮಲಿಂಗಾರೆಡ್ಡಿ, ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News