ಮಾತೆ ಮಹಾದೇವಿಯ ಮಾತು ಕೇಳುವ ಎರಡೇ ಎರಡು ಮನೆ ತೋರಿಸಿ: ಸಂಸದ ಪ್ರಭಾಕರ ಕೋರೆ

Update: 2018-05-07 16:51 GMT

ಬೆಂಗಳೂರು, ಮೇ 7: ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿಯವರ ಮಾತು ಕೇಳುವ ಎರಡೇ ಎರಡು ಮನೆಗಳನ್ನು ತೋರಿಸಿ ನೋಡೋಣ ಎಂದು ಬಿಜೆಪಿ ಸಂಸದ ಪ್ರಭಾಕರ ಕೋರೆ ಇಂದಿಲ್ಲಿ ಸವಾಲು ಹಾಕಿದ್ದಾರೆ.

ಸೋಮವಾರ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೆ ಮಹಾದೇವಿಯವರು, ಸ್ವಯಂ ಘೋಷಿತ ಧರ್ಮ ಗುರುಗಳು. ಅವರು ಕರೆ ಕೊಟ್ಟರೆ ಜನ ಮರಳಾಗುವುದಿಲ್ಲ ಎಂದು ಹೇಳಿದರು.

‘ಬೆಳಗಾವಿ ಉಳಿಸಿ’ ಘೋಷಣೆಯೊಂದಿಗೆ ಬೆಳಗಾವಿ ಉತ್ತರ ಕ್ಷೇತ್ರದ ಎಲ್ಲ ನಗರ ಸೇವಕರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್ ಶಾಸಕರು ನಗರ ಸೇವಕರ ಅಧಿಕಾರ ಕಿತ್ತುಕೊಂಡಿದ್ದು, ಪಾಲಿಕೆ ಹಣವನ್ನು ತಮ್ಮ ಅಭಿವೃದ್ಧಿಗೆ ಬಳಸಿಕೊಂಡಿದ್ದಾರೆ ಎಂದು ದೂರಿದರು.

ಬಿಜೆಪಿಗೆ ಎಂಇಎಸ್ ಬೆಂಬಲ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯ 9 ನಗರ ಸೇವಕರು ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದಾರೆಂದು ಮೇಯರ್ ನಾಗೇಶ್ ಮಂಡೋಳ್ಕರ್ ಹೇಳಿದರು. ಸುದ್ಧಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್, ಸಂಸದ ಸುರೇಶ ಅಂಗಡಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News