ರಾಜ್ಯ ವಿಧಾನಸಭಾ ಚುನಾವಣೆ: ಪ್ರಮುಖ ನಾಯಕರು, ಗಣ್ಯರ ಮತದಾನ

Update: 2018-05-11 14:44 GMT

ಬೆಂಗಳೂರು, ಮೇ 11: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾಳೆ ಶಿಕಾರಿಪುರದಲ್ಲಿ ಹುಚ್ಚೂರಾಯ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ  ಬೆಳಗ್ಗೆ 7 ಗಂಟೆಗೆ ತಾಲೂಕು ಕಚೇರಿ ಪಕ್ಕದ ಮತಗಟ್ಟೆಯಲ್ಲಿ ಮತ ಚಲಾಯಿಸಲಿದ್ದಾರೆ.

ಬಿಜೆಪಿ ಪ್ರಮುಖರ ಮತದಾನ ವಿವರ: ದಾಸರಹಳ್ಳಿ ಕ್ಷೇತ್ರದ ಅಭ್ಯರ್ಥಿ ಮುನಿರಾಜು ಬೆಳಗ್ಗೆ 7 ಗಂಟೆಗೆ ಶೆಟ್ಟಿಹಳ್ಳಿ ಪಾಠ ಶಾಲೆ, ಶಿವಾಜಿನಗರ ಕ್ಷೇತ್ರದ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯನಾಯ್ಡು ಬೆಳಗ್ಗೆ 7.30ಕ್ಕೆ ಸದಾಶಿವನಗರ, ನಟಿ ಭಾವನಾ ಬೆಳಗ್ಗೆ 11 ಗಂಟೆಗೆ ಚಿತ್ರದುರ್ಗದ ಜೋಗಿಮಠ ರಸ್ತೆಯಲ್ಲಿರುವ ಸರಕಾರಿ ಶಾಲೆಯಲ್ಲಿ ಮತದಾನ ಮಾಡಲಿದ್ದಾರೆ.

ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ಬೆಳಗ್ಗೆ 11.30ಕ್ಕೆ ಶಿರಸಿಯ ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿ, ರಾಜ್ಯಸಭಾ ಸದಸ್ಯ ರಾಜೀವ್‌ಚಂದ್ರಶೇಖರ್ ಕೋರಮಂಗಲ ಮೂರನೆ ಹಂತದಲ್ಲಿರುವ ರೆಡ್ಡಿ ಜನ ಸಂಘ ಶಾಲೆ, ನಟ ಹಾಗೂ ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಜಗ್ಗೇಶ್ ಬೆಳಗ್ಗೆ 7.30ಕ್ಕೆ ಮಲ್ಲೇಶ್ವರಂನಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಹಾಗೂ ಪದ್ಮನಾಭನಗರ ಕ್ಷೇತ್ರದ ಅಭ್ಯರ್ಥಿ ಆರ್.ಅಶೋಕ್ ಜಾಲಹಳ್ಳಿ ಸೆಂಟ್ ಲಾರೆನ್ಸ್ ಶಾಲೆ, ರಾಜಾಜಿನಗರ ಕ್ಷೇತ್ರದ ಅಭ್ಯರ್ಥಿ ಸುರೇಶ್‌ಕುಮಾರ್ ಬೆಳಗ್ಗೆ 7 ಗಂಟೆಗೆ ವಿಎನ್‌ಎಸ್ ಶಾಲೆ, ಸಂಸದ ಶ್ರೀರಾಮುಲು ಬಳ್ಳಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ, ಸಂಸದ ಪ್ರತಾಪ್ ಸಿಂಹ ಚಾಮುಂಡೇಶ್ವರಿಯ ನಿರ್ವಿಟ್ಟಿಗೆಯಲ್ಲಿ ಬೆಳಗ್ಗೆ 8 ಗಂಟೆಗೆ ಮತದಾನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News