ಡಿವೈಎಸ್ಪಿ ಸೇರಿ ಮೂವರು ಮೃತ್ಯು ಪ್ರಕರಣ: ಶೀಘ್ರದಲ್ಲಿಯೇ ಪರಿಹಾರ; ಸಂಜೀವ್‌ ಕುಮಾರ್

Update: 2018-05-11 15:48 GMT

ಬೆಂಗಳೂರು, ಮೇ 11: ಚುನಾವಣಾ ಕರ್ತವ್ಯದ ಮೇಲೆ ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಡಿವೈಎಸ್ಪಿ ಬಾಳೇಗೌಡ, ಎಸ್ಸೈ ಎಚ್.ಕೆ.ಶಿವಸ್ವಾಮಿ ಹಾಗೂ ಚಾಲಕ ವೇಣುಗೋಪಾಲ್ ಅವರ ಕುಟುಂಬಕ್ಕೆ ಶೀಘ್ರದಲ್ಲಿಯೇ ಪರಿಹಾರದ ಮೊತ್ತ ಮತ್ತು ನೆರವು ನೀಡಲಾಗುವುದೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಭರವಸೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಲಾರಿ ಢಿಕ್ಕಿ ಸಂಭವಿಸಿ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದರು. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮೃತರ ಕುಟುಂಬಗಳಿಗೆ ಅಗತ್ಯ ನೆರವು ನೀಡಲಾಗುವುದೆಂದು ಸಂಜೀವ್ ಕುಮಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News