ಚುನಾವಣೋತ್ತರ ಸಮೀಕ್ಷೆಗಳಲ್ಲಿ ಜೆಡಿಎಸ್ ‘ಕಿಂಗ್ ಮೇಕರ್’: ಈ ಬಗ್ಗೆ ದೇವೇಗೌಡರು ಹೇಳಿದ್ದೇನು?
Update: 2018-05-13 08:44 GMT
ಬೆಂಗಳೂರು, ಮೇ 13: ಯಾವುದನ್ನೂ ‘ಸ್ವೀಕರಿಸಲು’ ಅಥವಾ ‘ತಿರಸ್ಕರಿಸಲು ‘ ತಾನು ತಯಾರಾಗಿಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳಲ್ಲಿ ಜೆಡಿಎಸ್ ಕಿಂಗ್ ಮೇಕರ್ ಆದ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
“ಯಾವುದನ್ನೂ ‘ಸ್ವೀಕರಿಸಲು’ ಅಥವಾ ‘ತಿರಸ್ಕರಿಸಲು’ ನಾನು ತಯಾರಾಗಿಲ್ಲ. ಮತ ಎಣಿಕೆ ನಡೆಯುವ ಮೇ 15ರವರೆಗೆ ಕಾದು ನೋಡೋಣ” ಎಂದವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಹಿಡಿಯಲಿದೆ ಎಂದು ನಿನ್ನೆ ಮತ ಚಲಾಯಿಸಿದ ಬಳಿಕ ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದರು. 222 ಕ್ಷೇತ್ರಗಳಿಗೆ ಮತದಾನ ನಿನ್ನೆ ನಡೆದಿದ್ದು, ಅಧಿಕಾರಕ್ಕೇರಲು 113 ಸೀಟುಗಳನ್ನು ಗೆಲ್ಲಬೇಕಾಗಿದೆ.