ಬೆಂಗಳೂರು: ಈಜಲು ತೆರಳಿದ ಯುವಕ ಮೃತ್ಯು
Update: 2018-05-13 11:58 GMT
ಬೆಂಗಳೂರು, ಮೇ 13: ಕೆರೆಯೊಂದರಲ್ಲಿ ಈಜಲು ಹೋಗಿ ಯುವಕನೊಬ್ಬ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ನಿವಾಸಿ ಸಲ್ಮಾನ್(19) ಮೃತಪಟ್ಟಿರುವ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಸಮೀಪದ ಮಂಗಮಪಾಳ್ಯ ಕೆರೆಯಲ್ಲಿ ರವಿವಾರ ಮಧ್ಯಾಹ್ನ 12:30 ಸುಮಾರಿಗೆ ಈಜಲು ತೆರಳಿದ ಸಲ್ಮಾನ್, ಏಕಾಏಕಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಈತನ ಜೊತೆ ಇನ್ನಿಬ್ಬರು ಈಜಲು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಸಲ್ಮಾನ್ ಮೃತ ದೇಹವನ್ನು ಹೊರತೆಗೆದು ಮಡಿವಾಳದ ಸೆಂಟ್ ಜಾನ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.