ಶ್ರೀರಾಮುಲು ಡಿಸಿಎಂ ಹುದ್ದೆ ವಿಚಾರ ಬರೀ ಮಾಧ್ಯಮಗಳ ಸೃಷ್ಟಿ: ಅರವಿಂದ ಲಿಂಬಾವಳಿ

Update: 2018-05-14 16:02 GMT

ಬೆಂಗಳೂರು, ಮೇ 14: ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಅವರು ಉಪ ಮುಖ್ಯಮಂತ್ರಿ ಆಗುತ್ತಾರೆ ಎನ್ನುವುದು ಬರೀ ಮಾಧ್ಯಮಗಳ ಸೃಷ್ಟಿಯೇ ವಿನಹ ಯಾವುದೇ ಬಿಜೆಪಿ ಮುಖಂಡರು ಇದರ ಬಗ್ಗೆ ಅಧಿಕೃತವಾಗಿ ಹೇಳಿಕೆಗಳನ್ನು ನೀಡಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಈಗಾಗಲೇ ಘೋಷಿಸಿದಂತೆ ಬಿಎಸ್‌ವೈ ಅವರೆ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ, ಬಿಜೆಪಿ ಮುಖಂಡ ಶ್ರೀರಾಮುಲು ಅವರನ್ನು ಯಾವ ಬಿಜೆಪಿ ನಾಯಕರೂ ಡಿಸಿಎಂ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಇದು ಬರೀ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದರು.

120 ರಿ ರಿಂದ 130 ಬಿಜೆಪಿ ಸೀಟುಗಳು ಬರಲಿದ್ದು, ಯಾವುದೆ ಪಕ್ಷದ ಜೊತೆಗೆ ಮೈತ್ರಿಯನ್ನು ಮಾಡಿಕೊಳ್ಳುವ ಪ್ರಮಯವೇ ಬರುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News