ಕೊಚ್ಚಿನ್ ಗೆ ಹೋಗಬೇಡ, ವಾಪಸ್ ಬಾ, ಮಿನಿಸ್ಟರ್ ಮಾಡ್ತೀನಿ: ಬಿ.ಸಿ. ಪಾಟೀಲ್ ಗೆ ಆಮಿಷವೊಡ್ಡಿದ ಯಡಿಯೂರಪ್ಪ?

Update: 2018-05-19 07:57 GMT

ಬೆಂಗಳೂರು, ಮೇ 19: ವಿಶ್ವಾಸಮತಯಾಚನೆಗೆ ಇನ್ನೇನು ಕೆಲ ಗಂಟೆಗಳಷ್ಟೇ ಬಾಕಿಯುಳಿದಿರುವ ನಡುವೆ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ರಿಗೆ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಬಿಡುಗಡೆ ಮಾಡಿದೆ.

ಯಡಿಯೂರಪ್ಪ ಅವರು ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಜೊತೆ ಮಾತನಾಡಿದ್ದಾರೆನ್ನಲಾದ ಆಡಿಯೋದ ಪೂರ್ಣಪಾಠ ಈ ಕೆಳಗಿದೆ.

ಬಿಎಸ್ ವೈ ಆಪ್ತ (ಬಿ.ಸಿ. ಪಾಟೀಲರಿಗೆ): ಸಾರ್ ಒಂದು ನಿಮಿಷ ಸಾಹೇಬರು ಮಾತನಾಡುತ್ತಾರೆ

ಬಿಎಸ್ ವೈ: ಹಲೋ…ಹಲೋ..

ಬಿ.ಸಿ.ಪಾಟೀಲ್: ಅಣ್ಣಾ ಕಂಗ್ರಾಜುಲೇಶನ್ … ಹೇಳಿ… ನಮಸ್ಕಾರ...

ಬಿಎಸ್ ವೈ: ಹಲೋ… ಹಲೋ…ಎಲ್ಲಿದ್ದೀಯಪ್ಪಾ…?

ಬಿ.ಸಿ. ಪಾಟೀಲ್: ಅಣ್ಣಾ ನಾವು ಕೊಚ್ಚಿನ್ ಗೆ ಹೋಗುತ್ತಿದ್ದೇವೆ…. ಕೊಚ್ಚಿನ್ ಗೆ ಹೋಗುತ್ತಿದ್ದೇವೆ…ಬಸ್ ನಲ್ಲಿದ್ದೇನೆ.

ಬಿಎಸ್ ವೈ: ಹೋಗಬಾರದಿತ್ತು..! ಬಾರಯ್ಯ ನೀನು…ನಿನಗೇನು ಹೆಲ್ಪ್ ಬೇಕೋ ಮಾಡುತ್ತೇನೆ! ಮಂತ್ರಿಯಾಗುವಂತೆ ಬಾ… ನಿನಗೇನು ಬೇಕೋ ಅದನ್ನು ಮಾಡುತ್ತೇನೆ.

ಬಿ.ಸಿ. ಪಾಟೀಲ್: ಆಯಿತು ಅಣ್ಣಾ…ನೀವು ಮೊದಲೇ ಒಂದೂ ಚೂರು ಹೇಳಿದ್ದರೇ…

ಬಿ.ಎಸ್. ವೈ: ಟೈಮ್ ಕರೆಕ್ಟಾಗಿ ತಾನೇ ಹೇಳಬೇಕು!

ಬಿ.ಸಿ. ಪಾಟೀಲ್: ಹೌದು…

ಬಿ.ಎಸ್. ವೈ: ನೀನು ಹೋಗಬೇಡ… ಬಂದು ಬಿಡು…

ಬಿ.ಸಿ. ಪಾಟೀಲ್: ಬಸ್ ನಲ್ಲಿ ಇದೀವಿ ಈಗ..

ಬಿ.ಎಸ್. ವೈ: ಮನೇವ್ರು… ಏನಾದರು ಒಂದು ಕಾರಣ ಹೇಳಿಕೊಂಡು ವಾಪಾಸ್ ಬಾ!

ಬಿ.ಸಿ. ಪಾಟೀಲ್: ನನ್ನ ಪೊಸಿಶನ್ ಏನ್  ಅಂತಾ?

ಬಿ.ಎಸ್. ವೈ: ಯು ವಿಲ್ ಬಿಕಂ ದ  ಮಿನಿಸ್ಟರ್ ದಟ್ಸ್ ಆಲ್!

ಬಿ.ಸಿ. ಪಾಟೀಲ್: ಓ.ಕೆ. ಓ.ಕೆ. ಅಣ್ಣಾ… ನನ್ನ ಜತೆ ಇಬ್ಬರು ಮೂವರು ಇದ್ದಾರೆ!

ಬಿ.ಎಸ್. ವೈ: ನನ್ನ ಮೇಲೆ ವಿಶ್ವಾಸವಿದೆ ತಾನೇ…? ಕರೆದು ಕೊಂಡು ಬಾ…!

ಬಿ.ಸಿ. ಪಾಟೀಲ್ : ಖಂಡಿತ… ಖಂಡಿತ…!

ಬಿ.ಎಸ್. ವೈ: ಹಾಗಾದರೆ ಹೋಗಕೂಡದು ನೀನು ವಾಪಾಸ್ ಬಾ…!

ಬಿ.ಸಿ. ಪಾಟೀಲ್ : ಆಯ್ತಣ್ಣಾ…ಆಯ್ತಣ್ಣಾ…!

ಬಿ.ಎಸ್. ವೈ: ಒಂದು ಸರ್ತಿ ನೀನು ಕೊಚ್ಚಿನ್ ಗೆ ಹೋದರೆ ನೀನು ಸಿಗಲ್ಲ. ಅದು ಸಿಗದೇ ಇರುವ ವಿಷಯ

ಬಿ.ಸಿ. ಪಾಟೀಲ್: ಆಯ್ತಣ್ಣಾ… ಆಯ್ತಣ್ಣಾ…

ಬಿ.ಎಸ್. ವೈ: ಈಗೇನು ಮಾಡ್ತೀಯಾ… ಹೇಳು!

ಬಿ.ಸಿ. ಪಾಟೀಲ್: ತಾವು ಈಗ ಹೇಳಿದ್ದೀರಿ… ನಾನು ಐದು ನಿಮಿಷದಲ್ಲಿ ಹೇಳ್ತೀನೀ ಅಣ್ಣಾ…!

ಬಿ.ಎಸ್. ವೈ: ಶ್ರೀರಾಮುಲುಗೆ ಫೋನ್ ಮಾಡಿ ಹೇಳು…!

ಬಿ.ಸಿ. ಪಾಟೀಲ್: ಆಯ್ತಣ್ಣಾ… ಆಯ್ತಣ್ಣಾ….!!

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News