ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹೆಚ್ಚು ದಿನ ಉಳಿಯಲ್ಲ: ಶೋಭಾ ಕರಂದ್ಲಾಜೆ
Update: 2018-05-19 15:01 GMT
ಬೆಂಗಳೂರು, ಮೇ 19: ಕಾಂಗ್ರೆಸ್, ಜೆಡಿಎಸ್ ಅಪವಿತ್ರ ಮೈತ್ರಿ ಹೆಚ್ಚು ದಿನ ಉಳಿಯಲ್ಲ. ನಾಳೆಯಿಂದಲೇ ಅವರ ಕಚ್ಚಾಟ ಶುರುವಾಗಲಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅಭಿಪ್ರಾಯಿಸಿದರು.
ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ, ರಾಷ್ಟ್ರರಾಜಕಾರಣದಲ್ಲಿ ತಪ್ಪುಸಂದೇಶ ಹೋಗಬಾರದು ಎಂಬ ದೃಷ್ಟಿಯಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಬಿಜೆಪಿ ಯಾವತ್ತಿಗೂ ಸಂವಿಧಾನ ಮತ್ತು ನ್ಯಾಯಾಂಗದ ಮೇಲೆ ಗೌರವ ಹೊಂದಿದೆ. ಜನ ಆಶೀರ್ವಾದ ಮಾಡಿದ್ದು ಬಿಜೆಪಿಗೆ, ಆದರೆ ಈಗ ಅಧಿಕಾರದ ದಾಹದಿಂದ ಕಾಂಗ್ರೆಸ್, ಜೆಡಿಎಸ್ ಒಂದಾಗಿವೆ. ಈ ಅಪವಿತ್ರ ಮೈತ್ರಿ ಎಷ್ಟು ದಿನ ಬಾಳಲಿದೆ ಎಂಬುದನ್ನು ಕಾದು ನೋಡೋಣವೆಂದು ಅವರು ಹೇಳಿದರು.