ಶುರುವಾಗುವುದಕ್ಕೂ ಮೊದಲೇ ಮುಗಿದ ಮ್ಯಾಚ್: ಯಡಿಯೂರಪ್ಪ ಸರಕಾರ ಉರುಳಿದ ಬಗ್ಗೆ ಪ್ರಕಾಶ್ ರೈ ಟ್ವೀಟ್

Update: 2018-05-19 16:46 GMT

ಬೆಂಗಳೂರು, ಮೇ 19: “ಕರ್ನಾಟಕ ಕೇಸರಿಯಾಗುವುದಿಲ್ಲ. ಆದರೆ ವರ್ಣರಂಜಿತವಾಗಿ ಮುಂದುವರಿಯಲಿದೆ. ಶುರುವಾಗುವುದಕ್ಕಿಂತಲೂ ಮೊದಲೇ ಮ್ಯಾಚ್ ಮುಗಿದಿದೆ” ಎಂದು 55 ಗಂಟೆಗಳಲ್ಲೇ ಯಡಿಯೂರಪ್ಪ ಸರಕಾರ ಉರುಳಿದ ಬಗ್ಗೆ ನಟ, ನಿರ್ದೇಶಕ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರೈ, “ಶುರುವಾಗುವುದಕ್ಕೂ ಮೊದಲೇ ಮ್ಯಾಚ್ ಮುಗಿದಿದೆ. 56ನ್ನು ಮರೆತುಬಿಡಿ 55 ಗಂಟೆಗಳ ಕಾಲವೂ ಉಳಿಸಲು ಸಾಧ್ಯವಾಗಿಲ್ಲ. ತಮಾಷೆಯನ್ನು ಬದಿಗಿಡುವುದಾದರೆ, ರಾಜಕೀಯ ಕೆಸರೆರಚಾಟಕ್ಕೆ ಪ್ರಜೆಗಳು ಇನ್ನು ತಯಾರಾಗಬೇಕಾಗಿದೆ. ಪ್ರಜೆಗಳಿಗೆ ಹೋರಾಟ ಮಾಡಲು ಇನ್ನೂ ಎದ್ದು ನಿಲ್ಲುತ್ತೇನೆ ಹಾಗು #justasking ಮುಂದುವರಿಸುತ್ತೇನೆ” ಎಂದಿದ್ದಾರೆ.

ತನ್ನ ಜಸ್ಟ್ ಆಸ್ಕಿಂಗ್ ಆಂದೋಲನದ ಭಾಗವಾಗಿ ಪ್ರಕಾಶ್ ರೈ ಕೇಂದ್ರ ಸರಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ವಿಶ್ವಾಸಮತಯಾಚನೆಯಲ್ಲಿ ವಿಫಲವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರ ಪ್ರಕಾಶ್ ರೈ ಈ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News