ಶ್ರೀಕಾಂತ್‌ಗೆ ಕ್ರಿಕೆಟ್ ಬ್ಯಾಟ್ ಉಡುಗೊರೆ ನೀಡಿದ ಧೋನಿ

Update: 2018-05-20 08:43 GMT

ಚೆನ್ನೈ , ಮೇ 20: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ವಿಶ್ವದ ನಂ.3 ಬ್ಯಾಡ್ಮಿಂಟನ್ ತಾರೆ ಕೆ.ಶ್ರೀಕಾಂತ್ ಅವರಿಗೆ ತಮ್ಮ ಹಸ್ತಾಕ್ಷರವಿರುವ ಕ್ರಿಕೆಟ್ ಬ್ಯಾಟ್‌ನ ಉಡುಗೊರೆ ನೀಡಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪಡೆದು ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿರುವ ಶ್ರೀಕಾಂತ್ ಅವರಿಗೆ ಅನಿರೀಕ್ಷಿತ ಉಡುಗೊರೆ ಸಿಕ್ಕಿದೆ ಎಂದು ತಿಳಿದು ಬಂದಿದೆ.
 
   ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅವರು ಶ್ರೀಕಾಂತ್‌ಗೆ ಧೋನಿ ನೀಡಿದ್ದ ವಿಶೇಷ ಉಡುಗೊರೆಯನ್ನು ಅರ್ಪಿಸಿದರು. ಎಂಎಸ್‌ಕೆ ಪ್ರಸಾದ್ ಅವರು ಶ್ರೀಕಾಂತ್ ಅವರ ತಂದೆ (ಕೆವಿಎಸ್ ಕೃಷ್ಣ) ಅಭಿಮಾನಿ. ಅವರ ಬಳಿ ಪ್ರಸಾದ್ ಕ್ರಿಕೆಟ್ ಕಲಿತಿದ್ದರು. ಶ್ರೀಕಾಂತ್ ಅವರು ಧೋನಿ ಅಭಿಮಾನಿಯಾಗಿದ್ದಾರೆ.
‘‘ಒಂದು ದಿನ ಧೋನಿಯಿಂದ ಉಡುಗೊರೆ ಪಡೆಯಲು ಸಾಧ್ಯವೇ ಎಂದು ಶ್ರೀಕಾಂತ್ ಕೇಳಿದರು. ನೀವು ಬ್ಯಾಡ್ಮಿಂಟನ್ ನಲ್ಲಿ ಅಗ್ರಸ್ಥಾನಕ್ಕೇರಿದರೆ ಧೋನಿ ಕೈಯಿಂದ ಉಡುಗೊರೆ ಕೊಡಿಸುವುದಾಗಿ ಒಂದೊಮ್ಮೆ ಹೇಳಿದ್ದೆ. ಇತ್ತೀಚೆಗೆ ಶ್ರೀಕಾಂತ್ ಬ್ಯಾಡ್ಮಿಂಟನ್‌ನಲ್ಲಿ ನಂ.1ಸ್ಥಾನಕ್ಕೆ ತಲುಪಿದಾಗ ಧೋನಿಗೆ ಶ್ರೀಕಾಂತ್ ವಿಷಯ ತಿಳಿಸಿ ಅವರನ್ನು ಅಭಿನಂದಿಸಲು ಹೇಳಿದೆ.ಆಗ ಅವರಿಗೆ ಸಂತಸಗೊಂಡರು. ಯಾಕೆಂದರೆ ಧೋನಿ ಚಿಕ್ಕಂದಿನಲ್ಲಿ ಓರ್ವ ಬ್ಯಾಡ್ಮಿಂಟನ್ ಆಟಗಾರನಾಗಿದ್ದರು. ಈ ಕಾರಣದಿಂದಾಗಿ ಅವರು ಬ್ಯಾಡ್ಮಿಂಟನ್ ಆಟ ಮತ್ತು ಬ್ಯಾಡ್ಮಿಂಟನ್ ಆಟಗಾರರ ಬಗ್ಗೆ ಹೆಚ್ಚು ಆಸಕ್ತಿ ಯನ್ನು ಹೊಂದಿದ್ದರು’’ ಎಂದು ಪ್ರಸಾದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News