ಕಾಂಗ್ರೆಸ್-ಜೆಡಿಎಸ್ನಿಂದ ಜನರಿಗೆ ಮೋಸ: ಶಾಸಕ ಸಿ.ಟಿ ರವಿ
Update: 2018-05-20 15:04 GMT
ಬೆಂಗಳೂರು, ಮೇ 20: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೊದಲೇ ಘೋಷಣೆ ಮಾಡಿದ್ದರೆ ಅವರಿಗೆ ಗೆಲ್ಲುವುದು ಕಷ್ಟವಾಗುತ್ತಿತ್ತು. ಮುಸ್ಲಿಮ್ ಓಟ್ ಬ್ಯಾಂಕ್ ಒಡೆದು ಹೋಗಬಾರದೆಂದು ಮೈತ್ರಿ ವಿಚಾರವನ್ನು ಹೊರ ಹಾಕಿರಲಿಲ್ಲ ಎಂದು ಶಾಸಕ ಸಿ.ಟಿ.ರವಿ ಟೀಕಿಸಿದ್ದಾರೆ.
ರವಿವಾರ ಇಲ್ಲಿನ ಮಲ್ಲೇಶ್ವರಂನಲ್ಲಿ ಪಕ್ಷದ ಸೋಲಿನ ಪರಾಮರ್ಶೆ ಸಭೆ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ನಿಂದ ರಾಜ್ಯದ ಜನರಿಗೆ ಮೋಸ ಆಗಿದೆ. ಆದರೆ, ಜನ ಬಿಜೆಪಿಗೆ ಮೋಸ ಮಾಡಿಲ್ಲ ಎಂದು ಇದೇ ಸಂದರ್ಭದಲ್ಲಿ ವಿಶ್ಲೇಷಿಸಿದರು.
ಚುನಾವಣೆಗೆ ತಯಾರಿ: ಮೇಲ್ಮನೆಯ ಆರು ಮತ್ತು ಎರಡು ವಿಧಾನಸಭೆ ಚುನಾವಣೆ ಗೆಲುವಿನ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಎರಡೂ ಕ್ಷೇತ್ರಗಳಲ್ಲಿಯೂ ಜನತೆ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆಂದ ಅವರು, ಜಯನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಹಿರಿಯ ಮುಖಂಡರು ನಿರ್ಧರಿಸಲಿದ್ದಾರೆ ಎಂದರು.