ಚಂದ್ರಾವತಿ
Update: 2018-05-30 16:55 GMT
ಬಂಟ್ವಾಳ, ಮೇ 30: ತಾಲೂಕಿನ ಅರಳ ಗ್ರಾಮ ಎರ್ಮಾಳ್ ಸಮೀಪದ ಕಂಡದೊಟ್ಟು ನಿವಾಸಿ, ಪ್ರಗತಿಪರ ಕೃಷಿಕ ಎ.ರಾಮಯ್ಯ ಸಾಲ್ಯಾನ್ ಅವರ ಪತ್ನಿ ಚಂದ್ರಾವತಿ (70) ಅವರು ಹೃದಯಾಘಾತದಿಂದ ಮಂಗಳವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಪತಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಮನೆ ಸಮೀಪದಲ್ಲಿ ಬುಧವಾರ ನೆರವೇರಿತು. ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಹಿತ ಅಪಾರ ಮಂದಿ ಪಾಲ್ಗೊಂಡಿದ್ದರು.