ಬೆಂಗಳೂರು: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

Update: 2018-05-31 16:16 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 31: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಗರದ ಹೊರವಲಯ ಅವಲಹಳ್ಳಿ ಬಳಿಯಲ್ಲಿ ನಡೆದಿದೆ.

ಭಟ್ಟರಹಳ್ಳಿಯ ಪುನೀತ್(14) ಮೃತ ವಿದ್ಯಾರ್ಥಿಯಾಗಿದ್ದು, ಬುಧವಾರ ಸಂಜೆ ಭಟ್ಟರಹಳ್ಳಿ ಸಮೀಪದ ಕಿತ್ತಗನೂರು ಕೆರೆಯಲ್ಲಿ ಮೂವರು ಸ್ನೇಹಿತರೊಂದಿಗೆ ಈಜಲು ಹೋಗಿದ್ದರು ಎನ್ನಲಾಗಿದೆ.

ಪುನೀತ್ ಕೆರೆಯ ಆಳಕ್ಕೆ ಹೋಗಿ ಈಜಲು ಬಾರದೇ ಮೃತಪಟ್ಟಿದ್ದಾನೆ. ರಕ್ಷಣೆಗಾಗಿ ಸ್ನೇಹಿತರು ಕೂಗಿಕೊಂಡ ಕೂಡಲೇ ಸ್ಥಳೀಯರು ಧಾವಿಸಿ ಕೆರೆಗಿಳಿದು ಶೋಧ ನಡೆಸಿದರಾದರೂ ಆತ ಮೃತಪಟ್ಟಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News