ತುಮಕೂರು: ಕುರಿಗಾಹಿ ಮೇಲೆ ಚಿರತೆ ದಾಳಿ

Update: 2018-05-31 16:55 GMT

ತುಮಕೂರು,ಮೇ.31: ಕುರಿ ಮೇಯಿಸಲು ಹೋಗಿದ್ದ ಕುರಿ ಗಾಹಿ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಕಂದಿಕೆರೆ ಹೋಬಳಿಯ ಕೆಂಪರಾಯನಹಟ್ಟಿಯ ಮೂಡಲು ಗುಡ್ಡದ ಸಮೀಪವಿರುವ ಕೆಂಪಯ್ಯನ ತೋಟದಲ್ಲಿ ಇಂದು ಸಂಜೆ ನಾಲ್ಕು ಗಂಟೆ ಸುಮಾರಿಗೆ ಘಟನೆ.

ಕುರಿ ಮೇಯಿಸಲು ಹೋದ ರಾಜಣ್ಣ ಎಂಬಾತನ ಕುರಿ ಮೇಲೆ ಚಿರತೆ ದಾಳಿ ನಡೆಸಿದ್ದು, ಈ ಸಂದರ್ಭ ಕುರಿಯನ್ನು ಬಿಡಿಸಿಕೊಳ್ಳಲು ಹೋದ ರಾಜಣ್ಣನ ಮೇಲೂ ಚಿರತೆ ದಾಳಿ ಮಾಡಿ ಕಿವಿ, ತಲೆ ಬಳಿ ಗಾಯಗೊಳಿಸಿದೆ.

ಈ ವೇಳೆ ತೋಟದಲ್ಲಿದ್ದ ವ್ಯಕ್ತಿಗಳು ಜೋರಾಗಿ ಕೂಗಿಕೊಂಡಿದ್ದರಿಂದ ಚಿರತೆ ತಪ್ಪಿಸಿಕೊಂಡಿದೆ. ಕೂಡಲೇ ಆ್ಯಂಬುಲೆನ್ಸ್ ಗೆ ಫೋನ್ ಮಾಡಿ  ಗಾಯಾಳುವನ್ನು ಚಿಕ್ಕನಾಯಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ. ದಾಳಿಗೆ ಒಂದು ಕುರಿ ಬಲಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News