96 ಕೆಎಎಸ್ ಅಧಿಕಾರಿಗಳ ಮರು ನಿಯುಕ್ತಿ
Update: 2018-06-06 16:51 GMT
ಬೆಂಗಳೂರು, ಜೂ. 6: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ವರ್ಗಾವಣೆ ಮಾಡಿದ್ದ 96 ಕೆಎಎಸ್ ಅಧಿಕಾರಿಗಳನ್ನು ತಾವು ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಹುದ್ದೆಗಳಿಗೆ ಮರು ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಎಸ್.ರಂಗಪ್ಪ-ವಿಶೇಷ ಜಿಲ್ಲಾಧಿಕಾರಿ-2( ಬೆಂ.ಜಿಲ್ಲೆ), ಜೆ.ಲಿಂಗಮೂರ್ತಿ-ವಿಶೇಷ ಜಿಲ್ಲಾಧಿಕಾರಿ(ಬಿಡಿಎ), ರಾಘವೇಂದ್ರ ಪಿ.-ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ವಾಲ್ಮೀಕಿ ಮಹರ್ಷಿ ಪ.ಪಂಗಡ ಅಭಿವೃದ್ಧಿ ನಿಗಮ, ಸದಾಶಿವ ಪ್ರಭು-ಉಪ ಕಾರ್ಯದರ್ಶಿ, ಕಂದಾಯ ಇಲಾಖೆ ಸೇರಿದಂತೆ 96 ಕೆಎಎಸ್ ಅಧಿಕಾರಿಗಳನ್ನು ಮರು ನಿಯುಕ್ತಿಗೊಳಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.