ಯು.ಟಿ.ಖಾದರ್ ಗೆ ನಗರಾಭಿವೃದ್ಧಿ, ವಸತಿ ಖಾತೆಗಳು

Update: 2018-06-08 16:20 GMT

ಬೆಂಗಳೂರು, ಜೂ.8: ರಾಜ್ಯದ ನೂತನ ಸಮ್ಮಿಶ್ರ ಸರಕಾರದ ಸಚಿವರ ಖಾತೆ ಹಂಚಿಕೆ ಪಟ್ಟಿ ಇಂದು ಬಿಡುಗಡೆಯಾಗಿದ್ದು, ನೂತನ ಸಚಿವ ಯು.ಟಿ.ಖಾದರ್ ರಿಗೆ ನಗರಾಭಿವೃದ್ಧಿ, ವಸತಿ ಖಾತೆಗಳು ಲಭಿಸಿವೆ.

ಕರಾವಳಿಯಲ್ಲಿ ಜಯ ಗಳಿಸಿದ ಏಕಮಾತ್ರ ಕಾಂಗ್ರೆಸ್ ಅಭ್ಯರ್ಥಿ ಖಾದರ್ ರಿಗೆ ಸಚಿವ ಸ್ಥಾನ ಸಿಗುವುದು ಮೊದಲೇ ಬಹುತೇಕ ಖಚಿತಗೊಂಡಿತ್ತು. ಅದರಂತೆ ಜೂ.6ರಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾದರ್ ಕರ್ನಾಟಕ ಸರಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ದಕ್ಷಿಣ, ಕನ್ನಡ ಹಾಗು ಕೊಡಗು ಜಿಲ್ಲೆಗಳಲ್ಲಿ ಜಯ ಗಳಿಸಿರುವ ಏಕೈಕ ಕಾಂಗ್ರೆಸ್ ಶಾಸಕರಾಗಿರುವ ಯು.ಟಿ.ಖಾದರ್ ಈ ಹಿಂದಿನ ಸಿದ್ದರಾಮಯ್ಯ ಸರಕಾರದ ಅಧಿಕಾರವಧಿಯಲ್ಲಿ, ಆರೋಗ್ಯ ಹಾಗು ಆಹಾರ, ನಾಗರಿಕ ಸರಬರಾಜು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು.

ಈ ಹಿಂದಿನ ಅವಧಿಯಲ್ಲಿ ಲಭಿಸಿದ್ದ ಖಾತೆಗಳ ಗಮನಾರ್ಹ ನಿರ್ವಹಣೆಯಿಂದಾಗಿ ಸಮ್ಮಿಶ್ರ ಸರಕಾರದಲ್ಲಿ ಸಚಿವ ಖಾದರ್ ಅವರಿಗೆ ಮಹತ್ವದ ನಗರಾಭಿವೃದ್ಧಿ ಹಾಗು ವಸತಿ ಖಾತೆಗಳು ಸಿಗಲಿವೆ ಎಂದು ‘ವಾರ್ತಾ ಭಾರತಿ’ ಈ ಹಿಂದೆ ಸುದ್ದಿ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News