ಬೆಂಗಳೂರು: ಜೂ.13 ರಂದು ಮಾಜಿ ಪ್ರಧಾನಿಯಿಂದ ಇಫ್ತಾರ್ ಕೂಟ
Update: 2018-06-12 15:31 GMT
ಬೆಂಗಳೂರು, ಜೂ.12: ಸಮಸ್ತ ಮುಸ್ಲಿಮ್ ಬಾಂಧವರಿಗೆ ರಂಝಾನ್ ಪವಿತ್ರ ಮಾಸದ ಶುಭಾಶಯ ಕೋರುವ ನಿಟ್ಟಿನಲ್ಲಿ ಜೆಡಿಎಸ್ನಿಂದ ಜೂ.13 ರಂದು ಸಂಜೆ 6.30ಕ್ಕೆ ನಗರದ ಅರಮನೆ ಮೈದಾನ ಶೇಷ ಮಹಲ್ನಲ್ಲಿ ‘ಇಫ್ತಾರ್ ಕೂಟ’ ಆಯೋಜಿಸಿದೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಸೇರಿದಂತೆ ಜೆಡಿಎಸ್ ನಾಯಕರು ಹಾಗೂ ಮುಸ್ಲಿಮ್ ಮುಖಂಡರು ಸೇರಿ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಮಗ್ರಿಬ್ ನಮಾಝ್ಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.