ಆಂಧ್ರಪ್ರದೇಶದಲ್ಲಿ ಭೀಕರ ಅಪಘಾತ: 7 ಜನರ ಸಾವು

Update: 2018-06-17 07:23 GMT

ತಿರುಪತಿ,ಜೂ.17: ಶನಿವಾರ ತಡರಾತ್ರಿ ಇಲ್ಲಿಗೆ 110 ಕಿ.ಮೀ. ದೂರದ ಕುಪ್ಪಂ ಬಳಿಯ ಪೆದ್ದವಂಕ ಅರಣ್ಯ ಪ್ರದೇಶದಲ್ಲಿ ಲಾರಿಯೊಂದು ಪ್ರಪಾತಕ್ಕುರುಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಮಿಳುನಾಡಿನ ಮೂವರು ಮಹಿಳೆಯರು ಸೇರಿದಂತೆ 7 ಕಾರ್ಮಿಕರು ಸಾವನ್ನಪ್ಪಿದ್ದು,ಇತರ 12 ಜನರು ಗಾಯಗೊಂಡಿದ್ದಾರೆ.

ತಿರುವೊಂದರಲ್ಲಿ ಚಾಲಕ ಲಾರಿಯ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದು ಅಪಘಾತಕ್ಕೆ ಕಾರಣವೆನ್ನಲಾಗಿದೆ. ಗಾಯಾಳುಗಳನ್ನು ತಮಿಳುನಾಡಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ಮಾವಿನಹಣ್ಣುಗಳನ್ನು ಕೀಳಲು 20ಕ್ಕೂ ಅಧಿಕ ಕಾರ್ಮಿಕರನ್ನು ತಮಿಳುನಾಡಿನ ವಾಣಿಯಂಬಾಡಿಯಿಂದ ಕುಪ್ಪಂಗೆ ಸಾಗಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಕಾರ್ಮಿಕರ ಸಾವಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಶೋಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News