ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಸ್ವಯಂಘೋಷಿತ ದೇವಮಾನವರನ್ನು ಗಲ್ಲಿಗೇರಿಸಿ: ಬಾಬಾ ರಾಮ್ ದೇವ್

Update: 2018-06-20 07:44 GMT

ಕೋಟಾ, ಜೂ.20: ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಬಾಬಾಗಳು ಅಥವಾ ಸ್ವಯಂಘೋಷಿತ ದೇವಮಾನವರನ್ನು ಗಲ್ಲಿಗೇರಿಸಬೇಕು ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.

"ಮಿತಿಯನ್ನು ಮೀರುವವರನ್ನು ಜೈಲಿಗೆ ಕಳುಹಿಸುವುದು ಮಾತ್ರವಲ್ಲ, ಅವರನ್ನು ಗಲ್ಲಿಗೇರಿಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಿ ಇರಬಾರದು" ಎಂದು ಬಾಬಾ ರಾಮ್ ದೇವ್ ಹೇಳಿದರು.

ಕೇಸರಿ ವಸ್ತ್ರ ಧರಿಸುವುದು ಮಾತ್ರ ಧಾರ್ಮಿಕ ನಾಯಕನಾಗುವುದಕ್ಕೆ ಮಾನದಂಡವಲ್ಲ. ಎಲ್ಲಾ ಕೆಲಸಕ್ಕೂ ಅದರದ್ದೇ ಆದ ಮಿತಿಯಿದೆ. ಎಲ್ಲಾ ಕೆಲಸಕ್ಕೂ ಶಿಷ್ಟಾಚಾರವಿದೆ. ಬಾಬಾಗಳಿಗೂ ಇದು ಅನ್ವಯಿಸುತ್ತದೆ. ಕೇಸರಿ ವಸ್ತ್ರ ಧರಿಸಿದ ಮಾತ್ರಕ್ಕೆ ಯಾರೂ ಬಾಬಾಗಳಾಗುವುದಿಲ್ಲ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News