ನಿವೃತ್ತ ಪ್ರಾಧ್ಯಾಪಕ ಟಿ. ಸತ್ಯನಾರಾಯಣ್

Update: 2018-06-21 15:06 GMT

ಜಯಪುರ, ಜೂ.21: ಪಟ್ಟಣದ ಸುಭಾಷ್‍ರಸ್ತೆ ನಿವಾಸಿ ನಿವೃತ್ತ ಹಿರಿಯ ಅಧ್ಯಾಪಕಕೆ.ಟಿ. ಸತ್ಯನಾರಾಯಣ್ (76) ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ಬುಧವಾರ ರಾತ್ರಿ ನಿಧನರಾದರು.

ಅವರಿಗೆ ಪತ್ನಿ, ಪುತ್ರ, ಹಾಗೂ ಸಹೋದರಿಯರಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಪಟ್ಟಣದ ರುದ್ರಭೂಮಿಯಲ್ಲಿ ನೆರವೇರಿತು.

ಮೃತರು ತಮ್ಮ ಜೀವತಾವಧಿಯಲ್ಲಿ ಶೃಂಗೇರಿ, ಜಯಪುರ, ಅಗಳಗಂಡಿ, ಹೇರೂರು ಹಾಗೂ ಲೋಕನಾಥಪುರದಲ್ಲಿ ಸರಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಹಾಗೂ ಜಯಪುರದ ಪ್ರತಿಷ್ಠಿತ ಸತ್ಯಸಾಯಿ ಸಂಸ್ಥೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಜ್ಜನ ವ್ಯಕ್ತಿಯಾದ ಇವರು ತಮ್ಮ ವೃತ್ತಿಯಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಸಾಮಾಜಿಕ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಇವರಿಗೆ ಜಯಪುರ ನಾಗರೀಕರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ