10 ರೂ.ತೋರಿಸಿ 1.4 ಲಕ್ಷ ಕಳವು !

Update: 2018-06-23 13:27 GMT

ಬೆಂಗಳೂರು, ಜೂ.23: ಭದ್ರತಾ ಸಿಬ್ಬಂದಿಯೊಬ್ಬರಿಗೆ 10 ರೂಪಾಯಿ ನೋಟಿನ ಆಸೆ ತೋರಿಸಿ 1.4 ಲಕ್ಷ ರೂ.ನಗದು ಕಳವು ಮಾಡಿರುವ ಘಟನೆ ಇಲ್ಲಿನ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿವೇಕನಗರದ ವಿಕ್ಟೋರಿಯಾ ಲೇಔಟ್ ಈ ಘಟನೆ ನಡೆದಿದ್ದು, ಭದ್ರತಾ ಸಿಬ್ಬಂದಿ ಡೇವಿಡ್ ಥಾಮಸ್ ಹಣ ಕಳೆದುಕೊಂಡ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಥಾಮಸ್, ಇಲ್ಲಿನ ವಿಕ್ಟೋರಿಯಾ ಲೇಔಟ್ ಬ್ಯಾಂಕ್‌ನಿಂದ ಹಣ ಪಡೆದುಕೊಂಡು ಮನೆಗೆ ಹೊರಟ್ಟಿದ್ದರು. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳ ತಂಡ, ಥಾಮಸ್ ಅವರ ಮುಂದೆ 10 ರೂಪಾಯಿ ನೋಟನ್ನು ಎಸೆದಿದ್ದಾರೆ. ಈ ವೇಳೆ ಹಣ ತೆಗೆದುಕೊಳ್ಳಲು ಮುಂದಾದಾಗ 1.40 ಲಕ್ಷ ಹಣವಿದ್ದ ಚೀಲ ಕಸಿದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ವಿವೇಕನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News