ಬೆಂಗಳೂರು: ಎರಡು ಕಡೆ ಸರಗಳ್ಳತನ

Update: 2018-06-24 16:11 GMT

ಬೆಂಗಳೂರು, ಜೂ.24: ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಕಡೆ ಮಹಿಳೆಯರ ಕತ್ತಿನಲ್ಲಿದ್ದ ಸರಗಳ್ಳತನ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ರವಿವಾರ ಬೆಳಗ್ಗೆ ಇಲ್ಲಿನ ಅಮೃತಹಳ್ಳಿಯಲ್ಲಿ ವಾಯು ವಿಹಾರ ಹೊರಟ್ಟಿದ್ದ ಭುವನೇಶ್ವರನಗರದ ಸರೋಜಮ್ಮ ಎಂಬುವರನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳ ತಂಡ ಅವರ ಕತ್ತಿನಲ್ಲಿದ್ದ 60 ಗ್ರಾಂ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ

ಕೆಜಿಹಳ್ಳಿಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ಮಾರತ್ತಹಳ್ಳಿಯಲ್ಲಿರುವ ಮನೆಗೆ ಹೋಗುತ್ತಿದ್ದ ಪುಷ್ಪಾಂಜಲಿ ಎಂಬಾಕೆಯ 10 ಗ್ರಾಂ ಚಿನ್ನದ ಸರವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಕೆಜಿಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News