ಮುಂಬೈನಲ್ಲಿ ಭಾರೀ ಮಳೆ: ಹಲವು ಪ್ರದೇಶ ಜಲಾವೃತ

Update: 2018-06-25 06:11 GMT

ಮುಂಬೈ, ಜೂ.25: ಸೋಮವಾರ ಬೆಳಗ್ಗೆ ಮುಂಬೈನಲ್ಲಿ ಭಾರೀ ಮಳೆ ಸುರಿದಿದ್ದು,ದಾದರ್ ಹಿಂದ್‌ಮಾತಾ, ಕುರ್ಲಾ, ಸಾಂತಾಕ್ರೂಝ್, ಚೆಂಬೂರ್‌ಲಿಂಕ್ ರೋಡ್, ಕುರ್ಲಾ ಹಾಗೂ ಕಲೀನಾದ ಮೀಠಿ ನದಿ ಸೇತುವೆ ಸೇರಿದಂತೆ ಹಲವು ಪ್ರದೇಶಗಳು ಜಲಾವೃತವಾಗಿವೆ.

ನಗರದಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ರವಿವಾರ ಸಂಜೆ ಧೋಬಿ ತಲಾವ್‌ನಲ್ಲಿ ಮರ ಉರುಳಿ ಬಿದ್ದು ಓರ್ವ ವ್ಯಕ್ತಿ ಮೃತಪಟ್ಟರೆ, ನಾಲ್ವರು ಗಾಯಗೊಂಡಿದ್ದಾರೆ.

ರಸ್ತೆಗಳು ನೀರಿನಿಂದ ತುಂಬಿ ಹೋಗಿರುವ ಕಾರಣ 50ಕ್ಕೂ ಅಧಿಕ ಬೆಸ್ಟ್ ಬಸ್‌ಗಳ ಚಲಿಸುವ ಮಾರ್ಗವನ್ನು ಬದಲಿಸಲಾಗಿದೆ. ಮಳೆಯಿಂದ ಮುಂಬೈನ ಏರ್‌ಪೋರ್ಟ್‌ನಲ್ಲಿ, ಪಶ್ಚಿಮ ಉಪನಗರ ರೈಲ್ವೆ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News