ಉತ್ತಮ ಬೆಳೆಗಾಗಿ ರೈತರು ಮಂತ್ರ ಪಠಿಸುವ ಯೋಜನೆಗೆ ಚಾಲನೆ ನೀಡಿದ ಗೋವಾ ಕೃಷಿ ಸಚಿವ!

Update: 2018-07-04 07:55 GMT

ಹೊಸದಿಲ್ಲಿ, ಜು.4: ಉತ್ತಮ ಬೆಳೆಗಾಗಿ ವೈದಿಕ ಶ್ಲೋಕಗಳನ್ನು ಪಠಿಸುವ ಯೋಜನೆಯೊಂದನ್ನು ಗೋವಾ ಕೃಷಿ ಸಚಿವ ವಿಜಯ್ ಸರ್ದೇಸಾಯಿ ಅನಾವರಣಗೊಳಿಸಿದ್ದಾರೆ. ದಿನವೊಂದಕ್ಕೆ 20 ನಿಮಿಷಗಳ ಕಾಲ ರೈತರು ಧ್ಯಾನ ನಡೆಸಿ, 'ಓಂ ರುಂ ಜುಂ ಸಾಹ್' ಎಂದು ಪಠಿಸುವ ಮೂಲಕ 'ಕಾಸ್ಮಿಕ್ ಎನರ್ಜಿ'ಯನ್ನು ಪಡೆಯುವ ವಿಧಾನವನ್ನು ಅವರು ಬೆಂಬಲಿಸಿದ್ದಾರೆ.

'ಶಿವ್ ಯೋಗ್ ಕಾಸ್ಮಿಕ್ ಫಾರ್ಮಿಂಗ್' ಎಂಬ ಹೆಸರಿನ ಈ ಯೋಜನೆಯನ್ನು ಮಾಜಿ ಕೆಮಿಕಲ್ ಇಂಜಿನಿಯರ್, ಧಾರ್ಮಿಕ ನಾಯಕ ಅವಧೂತ್ ಶಿವಾನಂದ ವಿನ್ಯಾಸಗೊಳಿಸಿದ್ದಾರೆ. ವಿಜಯ್ ಸರ್ದೇಸಾಯಿಯವರ ಪತ್ನಿ ಉಷಾ ಕೂಡ ಅವಧೂತ್ ಶಿವಾನಂದರ ಶಿವ ಯೋಗ್ ಫೌಂಡೇಶನ್ ನ ಅನುಯಾಯಿಯಾಗಿದ್ದಾರೆ.

"ಇದು ಯಾವುದೇ ಹಣವನ್ನು ಒಳಗೊಂಡಿಲ್ಲ ಹಾಗು ಒಬ್ಬ ಕೃಷಿ ಸಚಿವನಾಗಿ ಕೃಷಿಯ ಬಗೆಗಿನ ಆಸಕ್ತಿಯನ್ನು ಹೆಚ್ಚಿಸುವ ಸಲುವಾಗಿ ನಾನು ಪ್ರತಿಯೊಂದು ವಿಧಾನವನ್ನು ಕಂಡುಹಿಡಿಯುತ್ತೇನೆ" ಎಂದವರು ಪಣಜಿಯಲ್ಲಿ ಯೋಜನೆಗೆ ಚಾಲನೆ ನೀಡಿದ ನಂತರ ವಿಜಯ್ ಸರ್ದೇಸಾಯಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News