ಚಂದ್ರಶೇಖರ ಕುಡ್ವ
Update: 2018-07-14 11:55 GMT
ಬಂಟ್ವಾಳ, ಜು. 14: ಪಾಣೆಮಂಗಳೂರು ನಿವಾಸಿ ಎನ್. ಚಂದ್ರಶೇಖರ ಕುಡ್ವ (41) ಅವರು ಹೃದಯಾಘಾತದಿಂದ ಜು.13ರಂದು ನಿಧನರಾಗಿದ್ದಾರೆ.
ಚಂದ್ರಶೇಖರ ಅವರು, ಎನ್.ಕೆ.ಜಿ. ಕುಡ್ವ ಮತ್ತು ಪಿ.ವಿ.ಶೆಣೈ ಪಾಲುದಾರರಾಗಿದ್ದು, ಉತ್ತಮ ಕ್ರಿಕೆಟ್ ಆಟಗಾರರೂ ಆಗಿದ್ದರು. ಎಸ್.ವಿ.ಎಸ್. ಪಾಣೆಮಂಗಳೂರು ತಂಡದ ನಾಯಕನಾಗಿದ್ದು ಹಲವು ಜಿ.ಎಸ್.ಬಿ. ಕ್ರಿಕೆಟ್ ಕೂಟಗಳಲ್ಲಿ ಭಾಗವಹಿಸಿದ್ದರು.
ಮೃತರು ತಾಯಿ, ಪತ್ನಿ, ಪುತ್ರ ಮತ್ತು ಅಪಾರ ಬಂಧುಗಳು, ಅಭಿಮಾನಿಗಳನ್ನು ಅಗಲಿದ್ದಾರೆ.