ಬೆಂಗಳೂರು: ಶಾಲಾ ಮಕ್ಕಳ ವ್ಯಾನ್ ಜಪ್ತಿ
Update: 2018-07-16 13:49 GMT
ಬೆಂಗಳೂರು, ಜು.16: ಸುರಕ್ಷಿತ ನಿಯಮ ಉಲ್ಲಂಘಿಸಿ, ಮಿತಿ ಮೀರಿ ಶಾಲಾ ಮಕ್ಕಳನ್ನು ತುಂಬಿಕೊಂಡು ಬರುತ್ತಿದ್ದ ಖಾಸಗಿ ವ್ಯಾನ್ವೊಂದನ್ನು ಹಲಸೂರು ಸಂಚಾರ ಠಾಣಾ ಪೊಲೀಸರು ಜಪ್ತಿ ಮಾಡಿರುವುದಾಗಿ ವರದಿಯಾಗಿದೆ.
ಯಾವುದೇ ಸುರಕ್ಷತೆ ಇಲ್ಲದೆ, ವಾಹನಗಳಲ್ಲಿ ಶಾಲಾ ಮಕ್ಕಳನ್ನು ಹೆಚ್ಚು ಕರೆದುಕೊಂಡು ಹೋಗಬಾರದು ಎನ್ನುವ ಎಂಬ ನಿಯಮವಿದೆ. ಆದರೆ, ನಿಯಮ ಉಲ್ಲಂಘಿಸಿ ತೆರಳುತ್ತಿದ್ದ ವ್ಯಾನ್ವೊಂದನ್ನು ಅಡ್ಡಗಟ್ಟಿ ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವ್ಯಾನ್ ಪರಿಶೀಲಿದಾಗ ವಾಹನಕ್ಕೆ ಯಾವುದೇ ವಿಮೆ ನವೀಕರಿಸಿಲ್ಲ ಎಂಬುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಈ ಸಂಬಂಧ ಕೂಡಲೇ ಬೇರೊಂದು ವಾಹನದಲ್ಲಿ ಶಾಲಾ ಮಕ್ಕಳನ್ನು ಕಳುಹಿಸಿಕೊಟ್ಟು, ವ್ಯಾನ್ ಜಪ್ತಿ ಮಾಡಿಕೊಂಡು ಚಾಲಕನ ವಿರುದ್ಧ ಮೊಕದ್ದಮೆ ದಾಖಲು ಮಾಡಿದ್ದಾರೆ.