ಸಿಆರ್ಪಿಎಫ್ ಸಿಬ್ಬಂದಿ ಪುಸ್ತಕ ಕಳವು: ದೂರು ದಾಖಲು
Update: 2018-07-18 13:29 GMT
ಬೆಂಗಳೂರು, ಜು.18: ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಿಆರ್ಪಿಎಫ್ ಕಚೇರಿಯ 18 ಮಂದಿ ಸಿಬ್ಬಂದಿಯ ಕರ್ತವ್ಯ ಸೇವಾ ಪುಸ್ತಕ, ಕಚೇರಿಗೆ ಸಂಬಂಧಿಸಿದ ಮುಖ್ಯ ದಾಖಲೆ ಕಳವು ಆಗಿದ್ದು, ಈ ಸಂಬಂಧ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ 2 ರಂದು ಸಿಆರ್ಪಿಎಫ್ ಎಎಸ್ಸೈ ಎಸ್.ರಂಜಿತ್ ಕುಮಾರ್ ಈ ದಾಖಲೆಗಳೊಂದಿಗೆ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಬಂದಾಗ ಅವರು ತಲೆ ಸುತ್ತು ಬಂದು ಸ್ವಲ್ಪಸಮಯ ಪ್ರಜ್ಞಾಹೀನರಾಗಿ ಕೆಳಗೆ ಬಿದ್ದಿದ್ದರು. ಈ ವೇಳೆ ದುಷ್ಕರ್ಮಿಗಳು ದಾಖಲೆಗಳನ್ನು ಕಳವು ಮಾಡಿದ್ದಾರೆ ಎನ್ನಲಾಗಿದೆ.
ದಾಖಲೆಗಳ ಬಗ್ಗೆ ಮಾಹಿತಿ ದೊರೆತರೆ ಉಪ್ಪಾರಪೇಟೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 2294 2503 ಅಥವಾ ನಿಯಂತ್ರಣ ಕೊಠಡಿ ಸಂಖ್ಯೆ 2294 3232 ಸಂಖ್ಯೆಗಳಿಗೆ ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.