ಕೃಷಿ ಪುಸ್ತಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2018-07-19 16:03 GMT

ಬೆಂಗಳೂರು, ಜು.19: ಬೆಂಗಳೂರು ಕೃಷಿ ವಿಶ್ವದ್ಯಾಲಯದ 2017ನೇ ಸಾಲಿನ ‘ಕನ್ನಡ ಕೃಷಿ ಪುಸ್ತಕ’ ಪ್ರಶಸ್ತಿಗೆ ಲೇಖಕರಿಂದ ಅರ್ಜಿ ಆಹ್ವಾನಿಸಿದೆ.

ಕೃಷಿ ಸಂಬಂಧಿತ ಕನ್ನಡ ಪುಸ್ತಕಗಳನ್ನು ಬರೆದಿರುವ ಲೇಖಕರು ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಶಸ್ತಿ 10 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. ಆಸಕ್ತರು ಆ.6 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಪುಸ್ತಕ ಸ್ವರಚಿತವಾಗಿದ್ದು, ಪ್ರಕಟನೆಯ ಮೊದಲ ಆವೃತ್ತಿಯಾಗಿರಬೇಕು. ಅನುವಾದಿತ ಅಥವಾ ಇತರ ಲೇಖಕರ ಬರಹಗಳ ಸಂಪಾದಿತ ಪುಸ್ತಕಗಳಿಗೆ ಅವಕಾಶವಿಲ್ಲ. ಪುಸ್ತಕ ಕನಿಷ್ಠ 1/8 ಕ್ರೌನ್ ಅಳತೆಯ ಮತ್ತು ತಾಂತ್ರಿಕ ಪುಟಗಳನ್ನು ಹೊರತುಪಡಿಸಿ ಕನಿಷ್ಠ 50 ಪುಟಗಳನ್ನು ಹೊಂದಿರಬೇಕು. 2017ರ ಜನವರಿಯಿಂದ ಡಿಸೆಂಬರ್ ಒಳಗೆ ಪ್ರಕಟವಾಗಿರುವ ಪುಸ್ತಕಗಳ ತಲಾ ಮೂರು ಪ್ರತಿಗಳನ್ನು ಕಳುಹಿಸಬೇಕು.

ವಿಳಾಸ: ಮುಖ್ಯಸ್ಥರು, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು-560065 ಅರ್ಜಿ ನಮೂನೆಯನ್ನು http://uasbangalore.edu.in ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080 2333 0239ಅನ್ನು ಸಂಪರ್ಕಿಸಬಹುದೆಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News