ಕರ್ನಲ್‌ಗೆ ಕಿಡ್ನಿ ಕಸಿಗೆ ಅನುಮತಿ: ಹೈಕೋರ್ಟ್‌ಗೆ ಆದೇಶದ ಪ್ರತಿ ಸಲ್ಲಿಕೆ

Update: 2018-07-19 16:08 GMT

ಬೆಂಗಳೂರು, ಜು.19: ಪುಣೆಯ ವಾಯುಸೇನೆಯ ಕರ್ನಲ್ ಪಂಕಜ್ ಭಾರ್ಗವ್ ಅವರಿಗೆ ಕಿಡ್ನಿ ಕಸಿಗೆ ರಾಜ್ಯ ಮಾನವ ಅಂಗಾಂಗ ಕಸಿ ಜೋಡನಾ ಅಧಿಕಾರಯುಕ್ತ ಸಮಿತಿಯು ಅನುಮತಿ ನೀಡಿದ್ದು, ಸಮಿತಿಯ ಆದೇಶ ಪ್ರತಿಯನ್ನು ಗುರುವಾರ ಸರಕಾರಿ ಪರ ವಕೀಲರು ಹೈಕೋರ್ಟ್‌ಗೆ ಸಲ್ಲಿಸಿದರು.

ನ್ಯಾಯಾಲಯದ ಆದೇಶದ ಹೊರತಾಗಿಯೂ ಪುಣೆಯ ವಾಯುಸೇನೆಯ ಕರ್ನಲ್ ಪಂಕಜ್ ಭಾರ್ಗವ್ ಅವರಿಗೆ ಮೂತ್ರಪಿಂಡ ಕಸಿ ಮಾಡಲು ಅನುಮತಿ ನೀಡಿರಲಿಲ್ಲ. ಹೀಗಾಗಿ, ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠವು ರಾಜ್ಯ ಮಾನವ ಅಂಗಾಂಗ ಕಸಿ ಅನುಮೋದನಾ ಸಮಿತಿಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಅಲ್ಲದೆ, ಬುಧವಾರದ ರಾತ್ರಿಯೊಳಗೆ ಅರ್ಜಿದಾರರ ಕಿಡ್ನಿ ಕಸಿಗೆ ಅನುಮತಿ ನೀಡುವ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸರಕಾರಕ್ಕೆ ತಾಕೀತು ಮಾಡಿತ್ತು. ಹೀಗಾಗಿ, ಗುರುವಾರ ಕರ್ನಲ್ ಅವರಿಗೆ ಕಿಡ್ನಿ ಕಸಿಗೆ ಸಮಿತಿಯು ಅನುಮತಿ ನೀಡಿರುವ ಆದೇಶ ಪ್ರತಿಯನ್ನು ಸರಕಾರಿ ಪರ ವಕೀಲರು ಪೀಠಕ್ಕೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News