ರಸ್ತೆ ಸಂಚಾರ ನಿಯಮ ಉಲ್ಲಂಘನೆ: ಗಣೇಶನ ವೇಷ ಧರಿಸಿ ಸವಾರರಿಗೆ ಜಾಗೃತಿ

Update: 2018-07-25 15:37 GMT

ಬೆಂಗಳೂರು, ಜು.25: ರಸ್ತೆ ಸಂಚಾರ ನಿಯಮ ಉಲಂಘಿಸಿದ ಸವಾರರು ಮತ್ತು ಚಾಲಕರಿಗೆ ಗಣೇಶನ ವೇಷ ಧರಿಸಿ ಹೂವು ನೀಡುವ ಮೂಲಕ ವಿಶಿಷ್ಟವಾಗಿ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಬುಧವಾರ ರಾಜಾಜಿನಗರದ ಪ್ರವೇಶದ್ವಾರದಲ್ಲಿ ಹೆಲ್ಮೆಟ್ ಧರಿಸದ ಮತ್ತು ಸೀಟ್ ಬೆಲ್ಟ್ ಹಾಕದ ಸವಾರರು ಮತ್ತು ಚಾಲಕರಿಗೆ ಗಣೇಶನ ವೇಷ ಧರಿಸಿದ್ದ ವ್ಯಕ್ತಿಯೊಬ್ಬರು ಹೂವುಗಳನ್ನು ನೀಡಿ, ಇನ್ನು ಮುಂದೆ ಸಂಚಾರ ನಿಯಮ ಪಾಲಿಸಿ ಎಂದು ಮನವಿ ಮಾಡಿದರು.

ಧಾರ್ಮಿಕವಾಗಿ ಗಣೇಶ ಹೆಚ್ಚು ಪ್ರಸಿದ್ಧಿ ಪಡೆದಿರುವ ದೇವರು. ಈ ಹಿನ್ನೆಲೆಯಲ್ಲಿ ಗಣೇಶನ ವೇಷ ಧರಿಸಿ ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಲಾಗಿದೆ ಎಂದು ರಾಜಾಜಿನಗರ ಸಂಚಾರ ಠಾಣೆಯ ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News