122 ಮಂದಿ ಉಪ ನೋಂದಣಾಧಿಕಾರಿಗಳ ವರ್ಗಾವಣೆ
Update: 2018-07-30 20:56 IST
ಬೆಂಗಳೂರು, ಜು. 30: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಒಟ್ಟು 122 ಮಂದಿ ಉಪ ನೋಂದಣಾಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
ರಾಜೇಶ್ವರಿ ಹೆಗಡೆ ಶಿರಸಿ-ಉಪ ನೋಂದಣಿ ಕಚೇರಿ, ರಘುರಾಮ್ ಪ್ರಸಾದ್ ಪಿ.-ಮಂಗಳೂರು ನಗರ, ಕವಿತಾ ಪಿ.ಬಿ.-ಮಂಗಳೂರು ತಾಲೂಕು, ರಾಮಕೃಷ್ಣ ಎಲ್.-ದಾವಣಗೆರೆ, ಹರಿಣಿ-ಜಯನಗರ, ಕಿರಣ್ ಸಿ.ಮೈಸೂರು ಉತ್ತರ, ಬಿ.ಜಿ. ಮಂಜು-ಮೈಸೂರು ಪೂರ್ವ, ಸಿ.ಜೆ.ಪ್ರಭಾಕರ್-ಗಂಗಾನಗರ ಸೇರಿದಂತೆ 122 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ.