ರಾಜ್ಯಸಭೆ ಉಪಸಭಾಪತಿ ಹುದ್ದೆ:ಎನ್‌ಡಿಎ ಅಭ್ಯರ್ಥಿಗೆ ಶಿವಸೇನೆ ಬೆಂಬಲ

Update: 2018-08-08 14:47 GMT

ಹೊಸದಿಲ್ಲಿ,ಆ.8: ಬಿಜೆಪಿಯಿಂದ ದೂರವಾಗಿರುವ ಶಿವಸೇನೆಯು ರಾಜ್ಯಸಭೆಯ ಉಪಸಭಾಪತಿ ಹುದ್ದೆಗೆ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಲಿದೆ.

ಆ.9ರಂದು ನಡೆಯಲಿರುವ ಚುನಾವಣೆಗೆ ಹರಿವಂಶ ನಾರಾಯಣ ಸಿಂಗ್ (ಜೆಡಿಯು) ಅವರು ಎನ್‌ಡಿಎ ಅಭ್ಯರ್ಥಿಯಾಗಿದ್ದಾರೆ.

ನಾವು ಎನ್‌ಡಿಎ ಅಭ್ಯರ್ಥಿಯನ್ನು ಬೆಂಬಲಿಸಲಿದ್ದೇವೆ ಎಂದು ಶಿವಸೇನೆ ಸಂಸದ ಅನಿಲ್ ದೇಸಾಯಿ ಅವರು ಬುಧವಾರ ಇಲ್ಲಿ ತಿಳಿಸಿದರು.

ಕಳೆದ ತಿಂಗಳು ಪ್ರತಿಪಕ್ಷವು ಮೋದಿ ಸರಕಾರದ ವಿರುದ್ಧ ಸಲ್ಲಿಸಿದ್ದ ಅವಿಶ್ವಾಸ ಸೂಚನೆಯ ಮೇಲಿನ ಮತದಾನದಿಂದ ಶಿವಸೇನೆಯು ದೂರವುಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News