ತ್ರಿವಳಿ ತಲಾಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ನಿದಾ ಖಾನ್ ಶೀಘ್ರ ಬಿಜೆಪಿ ಸೇರ್ಪಡೆ

Update: 2018-08-10 08:58 GMT

ಬರೇಲಿ, ಆ.10: ತ್ರಿವಳಿ ತಲಾಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ನಿದಾ ಖಾನ್ ಎಂಬಾಕೆ ಶೀಘ್ರ ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ತಾನು ತ್ರಿವಳಿ ತಲಾಕ್ ಹಾಗು ನಿಕಾಹ್ ಹಲಾಲಾ ಸಂತ್ರಸ್ತರ ಪರ ಹೋರಾಟ ನಡೆಸಲು ಬಿಜೆಪಿ ಸೇರಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

“ನಾನು ತ್ರಿವಳಿ ತಲಾಕ್ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಬಿಜೆಪಿಗೆ ಸೇರಿದ ಮೇಲೆ ರಾಷ್ಟ್ರಾದ್ಯಂತ ಇದರ ಬಗ್ಗೆ ಹೋರಾಟ ನಡೆಸಲಿದ್ದೇನೆ. ಯಾವಾಗ ಮತ್ತು ಎಲ್ಲಿ ಸೇರ್ಪಡೆಗೊಳ್ಳಲಿದ್ದೇನೆ ಎಂದು ಪಕ್ಷವು ನನಗೆ ಇನ್ನಷ್ಟೇ ಮಾಹಿತಿ ನೀಡಬೇಕಾಗಿದೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News