ದಸಂಸ ರಾಜ್ಯ ಸಂಚಾಲಕರಾಗಿ ಅಣ್ಣಯ್ಯ ಅವಿರೋಧ ಆಯ್ಕೆ

Update: 2018-08-12 15:44 GMT

ಬೆಂಗಳೂರು, ಆ. 12: ದಲಿತ ಸಂಘರ್ಷ ಸಮಿತಿ (ದಸಂಸ) ರಾಜ್ಯ ಸಂಚಾಲಕರಾಗಿ ಅಣ್ಣಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ರವಿವಾರ ಇಲ್ಲಿನ ನಿಡುಮಾಮಿಡಿ ಮಠದ ಸಭಾಂಗಣದಲ್ಲಿ ನಡೆದ ದಸಂಸ ರಾಜ್ಯ ಸಮಿತಿ ಸರ್ವ ಸದಸ್ಯರ ಸಭೆಯಲ್ಲಿ ಬೆನ್ನಿಗಾನಹಳ್ಳಿ ರಾಮಚಂದ್ರ, ಸತ್ಯಪ್ಪ ಕರವಾಡಿ, ಸುರೇಶ್ ರಾಯಪ್ಪಗೋಳ, ಎಸ್.ಆನಂದ್ ಅವರನ್ನು ಸಂಘಟನಾ ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು.

ಬೆಂಗಳೂರು ವಿಭಾಗೀಯ ಸಂಚಾಲರಾಗಿ ಮಂಜುನಾಥ ಅಣ್ಣಯ್ಯ, ಬೆಳಗಾವಿ ವಿಭಾಗ-ರಮೇಶ್ ಮಾದರ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕರಾಗಿ ಸುಜಾತಾ ರಮೇಶ್ ಕಾಂಬ್ಳೆ, ಮಹಾದೇವಿ ಮಣಾವಡ್ಡರ, ಸುಧಾ ಮರಕುಂಬಿ, ಗೀತಾ ಸಣ್ಣಕ್ಕಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News