ಸಿದ್ದರಾಮಯ್ಯ ಹುಟ್ಟುಹಬ್ಬ: ಮಂಡೆಲಾ ಅಭಿಮಾನಿಗಳ ವೇದಿಕೆಯಿಂದ ನಾದಸ್ವರ ಅರ್ಪಣೆ

Update: 2018-08-12 16:00 GMT

ಬೆಂಗಳೂರು, ಆ.12: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 70ನೆ ಜನ್ಮ ದಿನಾಚರಣೆಯನ್ನು ಡಾ.ನೆಲ್ಸನ್ ಮಂಡೆಲಾ ಅಭಿಮಾನಿಗಳ ವೇದಿಕೆಯ ಸದಸ್ಯರು ನಗರದ ಪುರಭವನದ ಮುಂಭಾಗ ನಾದಸ್ವರ ನುಡಿಸುವ ಮೂಲಕ ಆಚರಿಸಿದರು.

ಸುಮಾರು 108 ಕಲಾವಿದರು ಏಕಕಾಲದಲ್ಲಿ ನಾದಸ್ವರವನ್ನು ನುಡಿಸುವ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು. ಈ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಎಂ.ಎಸ್.ಮುತ್ತುರಾಜ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪರ ಆಡಳಿತ ನೀಡುವ ಮೂಲಕ ಬಡವರ ಪಾಲಿಗೆ ಆಶಾಕಿರಣರಾಗಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಜಾರಿಗೆ ತಂದ ಯೋಜನೆಗಳು ಇಂದಿಗೂ ಜನಪ್ರಿಯವಾಗಿವೆ. ರಾಜ್ಯದ ಸಾವಿರಾರು ಬಡ ಕುಟುಂಬಗಳು ಆರ್ಥಿಕವಾಗಿ ಬಲಿಷ್ಟಗೊಂಡಿವೆ. ದೀನ ದಲಿತರ ಅಸ್ಮಿತೆಗಾಗಿ ನಿರಂತರವಾಗಿ ಹೋರಾಟ ಮಾಡಿದವರು. ಅವರ ಹುಟ್ಟುಹಬ್ಬ ನಮಗೆ ಹರುಷದ ದಿನವಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News