ಡಾ. ಬಿ.ಪಿ. ಇಂದ್ರ
Update: 2018-08-12 17:00 GMT
ಬೆಳ್ತಂಗಡಿ, ಆ. 12: ವೇಣೂರಿನ ಪ್ರಖ್ಯಾತ ಹಿರಿಯ ವೈದ್ಯ ಡಾ ಬಿ.ಪಿ. ಇಂದ್ರ ಎಂದೇ ಪ್ರಸಿದ್ಧರಾಗಿದ್ದ ಇಲ್ಲಿಯ ಶಾಂತಿನಿಲಯದ ಡಾ. ಬಜರೆ ಪದ್ಮನಾಭ ಇಂದ್ರ (85) ಅವರು ರವಿವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಇವರು ವೈದ್ಯ ವೃತ್ತಿಯೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ವೇಣೂರು ದಿಗಂಬರ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿಯಾಗಿ, ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.