ಸಹಾಯ ಹಸ್ತ ನೀಡಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮನವಿ

Update: 2018-08-16 16:56 GMT

ಬೆಂಗಳೂರು, ಆ.16: ಪ್ರಕೃತಿ ವಿಕೋಪದಿಂದಾಗಿ ಅತಿವೃಷ್ಟಿ ಆವರಿಸಿ ಸಂಕಷ್ಟದಲ್ಲಿರುವ ನೆರೆ ರಾಜ್ಯವಾದ ಕೇರಳ ಸಂತ್ರಸ್ಥರಿಗೆ ಉದಾರವಾದ ಸಹಾಯ ಹಸ್ತ ನೀಡಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮನವಿ ಮಾಡಿದೆ.

ಮಾನವೀಯ ನೆಲೆಯಲ್ಲಿ ಸಹಾಯ ಮಾಡುವವರು ಕ್ರಾಸ್ ಮಾಡಿದ ಚೆಕ್‌ಗಳನ್ನು ಅಥವಾ ಡಿಮ್ಯಾಂಡ್ ಡ್ರಾಫ್ಟ್‌ಗಳನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ ಹೆಸರಿಗೆ ಸಂದಾಯವಾಗುವಂತೆ ಮಾಡಿ, ಪ್ರಧಾನ ಕಾರ್ಯದರ್ಶಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆ, ನಂ.26, ರೆಡ್‌ಕ್ರಾಸ್ ಭವನ, 1 ನೆ ಅಂತಸ್ತು, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು-01 ಇಲ್ಲಿಗೆ ಕಳುಹಿಸಬಹುದು.

ಅಲ್ಲದೆ, ಖಾತೆಗೆ ಸಂದಾಯ ಮಾಡುವವರು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ರಿಲೀಫ್, ಖಾತೆ ಸಂಖ್ಯೆ-181500301000273(ವಿಜಯಾ ಬ್ಯಾಂಕ್), ಗಾಂಧಿನಗರ ಶಾಖೆ ಇದಕ್ಕೆ ಕಳುಹಿಸಬಹುದಾಗಿದೆ. ಜತೆಗೆ ಸಂತ್ರಸ್ಥರಿಗೆ ದಿನನಿತ್ಯ ಬಳಕೆ ವಸ್ತುಗಳು, ಆಹಾರ ಪದಾರ್ಥಗಳು, ಔಷಧಿಗಳು, ಪಾತ್ರೆಗಳು ಸೇರಿದಂತೆ ಇನ್ನಿತರೆ ವಸ್ತುಗಳನ್ನು ಸಹಾಯ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9902535661 ಸಂಖ್ಯೆಯನ್ನು ಸಂಪರ್ಕ ಮಾಡಬಹುದಾಗಿದೆ ಎಂದು ಸಂಸ್ಥೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News