ಬೆಂಗಳೂರು: ಎರಡು ಕಡೆಗಳಲ್ಲಿ ಸರಗಳ್ಳತನ

Update: 2018-08-17 18:12 GMT

ಬೆಂಗಳೂರು, ಆ.17: ನಗರ ವ್ಯಾಪ್ತಿಯಲ್ಲಿ ದಿನೇ ದಿನೇ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಕ್ರವಾರವೂ ಸಹ ಎರಡು ಕಡೆಗಳಲ್ಲಿ ಸರ ಕಳವು ಮಾಡಿರುವ ಪ್ರಕರಣಗಳು ಬೆಳಕಿಗೆಬಂದಿವೆ.

ಹೆಣ್ಣೂರು: ಎಚ್‌ಬಿಆರ್ ಲೇಔಟ್, 5ನೇ ಬ್ಲಾಕ್ ನಿವಾಸಿ ಜ್ಯೋತಿ ಎಂಬುವರು ಶುಕ್ರವಾರ ಬೆಳಗ್ಗೆ 8:15ರ ಸುಮಾರಿಗೆ ಮನೆ ಸಮೀಪದಲ್ಲಿ ಇಬ್ಬರು ಮಹಿಳೆಯರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಜ್ಯೋತಿ ಅವರ ಕೊರಳಲ್ಲಿದ್ದ 40 ಗ್ರಾಂ ಸರ ಎಳೆದುಕೊಂಡು ಪರಾರಿಯಾಗಿದ್ದಾನೆ.

ಸದಾಶಿವನಗರ: ಎಂಎಸ್‌ಆರ್ ನಗರದ ಹೊಸ ಬಿಎಲ್ ರಸ್ತೆ ದೇವಸಂದ್ರ ಬಸ್ ನಿಲ್ದಾಣದ ಬಳಿ ಹಾಲು ತರಲು ಶುಕ್ರವಾರ ಬೆಳಗ್ಗೆ 9:15ರಲ್ಲಿ ಹಾಲಿನ ಬೂತ್‌ಗೆ ನಡೆದು ಹೋಗುತ್ತಿದ್ದ ಸುಭದ್ರಾ ಎಂಬಾಕೆಯನ್ನು ಬೈಕ್‌ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಗಮನ ಬೇರೆಡೆ ಸೆಳೆದು ಆಕೆಯ ಕೊರಳಲಿದ್ದ 40 ಸಾವಿರ ಬೆಲೆಯ ಸರ ಕಸಿದು ಪರಾರಿಯಾಗಿದ್ದಾರೆ.

ಪ್ರಕರಣ ಸಂಬಂಧ ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಮುಂದಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News