ಬೆಂಗಳೂರು: ಎರಡು ಕಡೆಗಳಲ್ಲಿ ಸರಗಳ್ಳತನ
ಬೆಂಗಳೂರು, ಆ.17: ನಗರ ವ್ಯಾಪ್ತಿಯಲ್ಲಿ ದಿನೇ ದಿನೇ ಸರಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಕ್ರವಾರವೂ ಸಹ ಎರಡು ಕಡೆಗಳಲ್ಲಿ ಸರ ಕಳವು ಮಾಡಿರುವ ಪ್ರಕರಣಗಳು ಬೆಳಕಿಗೆಬಂದಿವೆ.
ಹೆಣ್ಣೂರು: ಎಚ್ಬಿಆರ್ ಲೇಔಟ್, 5ನೇ ಬ್ಲಾಕ್ ನಿವಾಸಿ ಜ್ಯೋತಿ ಎಂಬುವರು ಶುಕ್ರವಾರ ಬೆಳಗ್ಗೆ 8:15ರ ಸುಮಾರಿಗೆ ಮನೆ ಸಮೀಪದಲ್ಲಿ ಇಬ್ಬರು ಮಹಿಳೆಯರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ಜ್ಯೋತಿ ಅವರ ಕೊರಳಲ್ಲಿದ್ದ 40 ಗ್ರಾಂ ಸರ ಎಳೆದುಕೊಂಡು ಪರಾರಿಯಾಗಿದ್ದಾನೆ.
ಸದಾಶಿವನಗರ: ಎಂಎಸ್ಆರ್ ನಗರದ ಹೊಸ ಬಿಎಲ್ ರಸ್ತೆ ದೇವಸಂದ್ರ ಬಸ್ ನಿಲ್ದಾಣದ ಬಳಿ ಹಾಲು ತರಲು ಶುಕ್ರವಾರ ಬೆಳಗ್ಗೆ 9:15ರಲ್ಲಿ ಹಾಲಿನ ಬೂತ್ಗೆ ನಡೆದು ಹೋಗುತ್ತಿದ್ದ ಸುಭದ್ರಾ ಎಂಬಾಕೆಯನ್ನು ಬೈಕ್ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಗಮನ ಬೇರೆಡೆ ಸೆಳೆದು ಆಕೆಯ ಕೊರಳಲಿದ್ದ 40 ಸಾವಿರ ಬೆಲೆಯ ಸರ ಕಸಿದು ಪರಾರಿಯಾಗಿದ್ದಾರೆ.
ಪ್ರಕರಣ ಸಂಬಂಧ ಆಯಾ ಠಾಣೆ ಪೊಲೀಸರು ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಮುಂದಾಗಿದ್ದಾರೆ.