ಪ್ರವಾಹಪೀಡಿತ ಕೇರಳಕ್ಕೆ ನೆರವಾಗಲು ಮುಂದಾದ ಯುಎಇ: ವಿಶೇಷ ಸಮಿತಿ ರಚನೆ

Update: 2018-08-18 06:06 GMT

ಅಬುಧಾಬಿ, ಆ.18: ಭೀಕರ ಪ್ರವಾಹದಿಂದ ತತ್ತರಿಸಿರುವ ಕೇರಳದ ಜನತೆಗೆ ನೆರವಾಗಲು ಸಮಿತಿಯೊಂದನ್ನು ಯುಎಇ ರಚಿಸಿದೆ. ಈ ಬಗ್ಗೆ ಯುಎಇ ಉಪಾಧ್ಯಕ್ಷ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್  ಟ್ವೀಟ್ ಮಾಡಿದ್ದಾರೆ.

“ಯುಎಇಯಲ್ಲಿ ನಮ್ಮ ಯಶೋಗಾಥೆಯಲ್ಲಿ ಎಂದಿಗೂ ಈಗಲೂ ಕೇರಳದ ಜನತೆ ಒಂದು ಭಾಗವಾಗಿದ್ದಾರೆ. ಸಂತ್ರಸ್ತರಿಗೆ ನೆರವಾಗಲು ನಮಗೆ ವಿಶೇಷ ಜವಾಬ್ದಾರಿಯಿದೆ” ಎಂದವರು ಟ್ವೀಟ್ ಮಾಡಿದ್ದಾರೆ.

“ಯುಎಇ ಹಾಗು ಭಾರತೀಯ ಸಮುದಾಯ ಸಂತ್ರಸ್ತರಿಗೆ ನೆರವಾಗುವಲ್ಲಿ ಪರಸ್ಪರ ಕೈಜೋಡಿಸಲಿದೆ. ತಕ್ಷಣ ಪರಿಹಾರಕ್ಕಾಗಿ ಈಗಾಗಲೇ ಸಮಿತಿಯೊಂದನ್ನು ರಚಿಸಲಾಗಿದೆ” ಎಂದವರು ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

“ಕೇರಳವು ಭಾರೀ ಪ್ರವಾಹಕ್ಕೆ ತುತ್ತಾಗಿದೆ. ನೂರಾರು ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ. ಭಾರತದಲ್ಲಿರುವ ನಮ್ಮ ಸಹೋದರರಿಗೆ ಸಹಾಯಹಸ್ತ ಜೋಡಿಸುವುದನ್ನು ಮರೆಯದಿರಿ” ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News