ವೈ.ವಾಸುದೇವ ಸುವರ್ಣ

Update: 2018-08-21 13:51 GMT

ಪಡುಬಿದ್ರಿ,ಆ.21: ಎರ್ಮಾಳು ತೆಂಕ ಮೊಗವೀರ ಸಮಾಜದ ಹಿರಿಯರಾದ ಎರ್ಮಾಳು ವಾಸುದೇವ ಸುವರ್ಣ(80) ಅಸೌಖ್ಯದಿಂದ ಮಂಗಳವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.  

1980ರ ದಶಕದಲ್ಲಿ ಮುಂಚೂಣಿಯ ಮತ್ಸ್ಯೋದ್ಯಮಿಯಾಗಿ, ಪಟ್ರೋಲ್ ಪಂಪ್ ಮಾಲಕರಾಗಿದ್ದ ವಾಸುದೇವ ಸುವರ್ಣರು ಐಸ್ ಪ್ಲಾಂಟ್ ಉದ್ಯಮವನ್ನೂ ನಡೆಸಿದ್ದರು. ಕಾಪು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಪಡುಬಿದ್ರಿ ಜೇಸಿಐನ ಸ್ಥಾಪಕ ಸದಸ್ಯರಾಗಿದ್ದ ಇವರು, ಪಡುಬಿದ್ರಿ ಲಯನ್ಸ್ ಕ್ಲಬ್ಬಿನಲ್ಲೂ ವಿವಿಧ ಹುದ್ದೆಗಳನ್ನು ಅಲಂಕರಿಸಿದವರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ