ಆ.23 ರಿಂದ ಸಚಿವ ದೇಶಪಾಂಡೆ 5 ಜಿಲ್ಲೆಗಳಿಗೆ ಪ್ರವಾಸ
Update: 2018-08-21 14:13 GMT
ಬೆಂಗಳೂರು, ಆ.21: ಆ.23 ರಿಂದ ಎರಡು ದಿನಗಳ ಕಾಲ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಆ.23ರ ಬೆಳಗ್ಗೆ 8 ಗಂಟೆಗೆ ಬಾಗಲಕೋಟೆ, ಮಧ್ಯಾಹ್ನ 1 ಗಂಟೆಗೆ ವಿಜಯಪುರ, ಸಂಜೆ 5 ಗಂಟೆಗೆ ಯಾದಗಿರಿಗೆ ಭೇಟಿ ನೀಡಲಿರುವ ಸಚಿವರು, ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಹಾನಿ ಮತ್ತು ಕೈಗೊಂಡ ಪರಿಹಾರ ಕ್ರಮಗಳನ್ನು ಕುರಿತಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.
ಅದೇ ರೀತಿ, ಆ.24ರಂದು ಕಲಬುರಗಿ ಮತ್ತು ಮಧ್ಯಾಹ್ನ ಗಂಟೆಗೆ ಬೀದರ್ಗೆ ಭೇಟಿ ನೀಡಿ, ಸಭೆ ನಡೆಸುವರು ಎಂದು ಪ್ರಕಟನೆ ತಿಳಿಸಿದೆ.