ಅನಂತ ಆಚಾರ್ಯ

Update: 2018-08-21 15:27 GMT

ಬಂಟ್ವಾಳ, ಆ. 21: ತಾಲೂಕಿನ ಸಿದ್ಧಕಟ್ಟೆ ಸಮೀಪದ ಪೂಂಜ ನಿವಾಸಿ, ಇಲ್ಲಿನ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಪಿ.ಅನಂತ ಆಚಾರ್ಯ (80) ಅವರು ಅಸೌಖ್ಯದಿಂದ ಸೋಮವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು.

ಹಿರಿಯ ಜ್ಯೋತಿಷಿಯಾಗಿದ್ದ ಇವರು, ಪೂಂಜ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದು, ಇಲ್ಲಿನ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವಕ್ಕೆ ಅವಿರತ ಶ್ರಮಿಸಿದ್ದರು. ಹಿರಿಯ ಪುರೋಹಿತರಾಗಿದ್ದ ಇವರು ಸ್ಥಳೀಯವಾಗಿ "ಅಸ್ರಣ್ಣ" ಎಂದೇ ಗುರುತಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಮನೆ ಸಮೀಪದಲ್ಲಿ ಸೋಮವಾರ ರಾತ್ರಿ ನೆರವೇರಿತು. ಮೃತರು ಪತ್ನಿ, ಪುತ್ರ ಮತ್ತು ಐವರು ಪುತ್ರಿಯರು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ