ಕುಲದೀಪ್ ನಯ್ಯರ್ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ

Update: 2018-08-23 15:57 GMT

ಬೆಂಗಳೂರು, ಆ. 23: ಹಿರಿಯ ಪತ್ರಕರ್ತ, ಲೇಖಕ ಕುಲದೀಪ್ ನಯ್ಯರ್ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತುರ್ತುಪರಿಸ್ಥಿತಿ ವಿರುದ್ಧ ದನಿ ಎತ್ತಿದ ಪತ್ರಕರ್ತರಲ್ಲಿ ಕುಲದೀಪ್ ನಯ್ಯರ್ ಅವರು ಮುಂಚೂಣಿಯಲ್ಲಿದ್ದರು. ಮಾನವ ಹಕ್ಕುಗಳ ಕುರಿತು ಅತೀವ ಕಾಳಜಿ ಹೊಂದಿದ್ದ ಅವರು ಭಾರತ -ಪಾಕಿಸ್ತಾನ ಸಂಬಂಧ ಸುಧಾರಣೆಯಾಗಬೇಕೆಂಬ ತೀವ್ರ ಹಂಬಲ ಹೊಂದಿದ್ದರು ಎಂದು ಮುಖ್ಯಮಂತ್ರಿ ಸ್ಮರಿಸಿಕೊಂಡಿದ್ದಾರೆ.

ಕುಲದೀಪ್ ನಯ್ಯರ್ ಅವರ ನಿಧನದಿಂದ ನಾವು ಒಬ್ಬ ಶ್ರೇಷ್ಠ, ನಿಷ್ಠುರ ಪತ್ರಕರ್ತರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಕುಮಾರಸ್ವಾಮಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News