ಬೆಂಗಳೂರು: ವಿದೇಶಿ ಮಹಿಳೆಯರಿಂದ ಆಟೊ ಚಾಲಕನ ಮೇಲೆ ಹಲ್ಲೆ; ಆರೋಪ

Update: 2018-08-25 15:49 GMT

ಬೆಂಗಳೂರು, ಆ.25: ವಿದೇಶಿ ಮಹಿಳೆಯರು ಆಟೊ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮೇಖ್ರಿ ವೃತ್ತ ಸಮೀಪದ ನಾಗಶೆಟ್ಟಿಹಳ್ಳಿ ಬಳಿ ನಡೆದಿದೆ. ಕಿರಣ್ ಎಂಬ ಆಟೊ ಚಾಲಕನ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.

ಶನಿವಾರ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಿಂದ ಕಿರಣ್, ಮೇಖ್ರಿ ಮಾರ್ಗವಾಗಿ ಬರುತ್ತಿದ್ದಾಗ, ನ್ಯೂಜಿಲ್ಯಾಂಡ್ ದೇಶದ ವಿದೇಶಿ ಮಹಿಳೆಯರಿದ್ದ ಕಾರು, ಆಟೊಗೆ ಢಿಕ್ಕಿ ಹೊಡೆದಿದೆ. ವಾಹನ ಜಖಂ ಆಗಿದೆ ಎಂದು ಪ್ರಶ್ನಿಸಿದ ಆಟೊ ಚಾಲಕ ಕಿರಣ್‌ಗೆ, ಇಬ್ಬರು ವಿದೇಶಿ ಮಹಿಳೆಯರು ಬಟ್ಟೆ ಹರಿದು ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ.

ಹಲ್ಲೆಯಿಂದ ಕಿರಣ್ ಅವರಿಗೆ ಗಾಯವಾಗಿದೆ. ಈ ಸಂಬಂಧ ಸ್ಥಳಕ್ಕಾಗಮಿಸಿದ ಸಂಜಯ್ ನಗರ ಠಾಣಾ ಪೊಲೀಸರು, ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಸಂಧಾನ: ಮುಹಮ್ಮದ್ ನಲಪಾಡ್ ಹಲ್ಲೆ ಪ್ರಕರಣ ಸಂಬಂಧ ವಿದ್ವತ್ ತಂದೆ ಲೋಕನಾಥ್, ಆಟೊ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆಯಲ್ಲಿ ತಪ್ಪಿತಸ್ಥರು ಎನ್ನಲಾದ ವಿದೇಶಿ ಮಹಿಳೆಯರು ಪರವಾಗಿ ಸಂಜಯ್ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಂಧಾನ ನಡೆಸಲು ಯತ್ನಿಸಿದರು ಎನ್ನುವ ಆರೋಪ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News