ಸೆ.3: ಮೈಲಾರ ಮಹದೇವಪ್ಪ ಅಂಚೆ ಚೀಟಿ ಬಿಡುಗಡೆ

Update: 2018-09-01 15:55 GMT

ಬೆಂಗಳೂರು, ಸೆ.1: ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿ ಹುತಾತ್ಮರಾದ ಮೈಲಾರ ಮಹದೇವಪ್ಪ ಸ್ಮರಣೆಗಾಗಿ ಭಾರತೀಯ ಅಂಚೆ ಇಲಾಖೆ ಅವರ ಅಂಚೆ ಚೀಟಿಯನ್ನು ನಾಳೆ (ಸೆ.3) ಬಿಡುಗಡೆ ಮಾಡುತ್ತಿದೆ.

ಗಾಂಧೀಜಿಯವರ ಶಿಷ್ಯರಾಗಿ, ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಕೇವಲ 32 ವರ್ಷ ಬದುಕಿದ್ದರೂ ಸಾರ್ಥಕ ಜೀವನ ಸಾಗಿಸಿ ಹುತಾತ್ಮರಾದ ಮೈಲಾರ ಮಹದೇವಪ್ಪ ಅವರ ತ್ಯಾಗ, ಬಲಿದಾನ ಗೌರವಾರ್ಥವಾಗಿ ಭಾರತ ಸರಕಾರ ಅವರ ಅಂಚೆ ಚೀಟಿ ಬಿಡುಗಡೆ ಮಾಡುತ್ತಿದೆ. ಕೇಂದ್ರ ಸಂಪರ್ಕ ಖಾತೆ ಸಚಿವ ಮನೋಜ್ ಸಿನ್ಹಾ ಈ ಅಂಚೆ ಚೀಟಿಯನ್ನು ಸೆ.3ರಂದು ಬೆಳಗ್ಗೆ 10ಗಂಟೆಗೆ ಬಿಡುಗಡೆ ಮಾಡಲಿದ್ದು, ಕೇಂದ್ರ ಸಚಿವ ಅನಂತಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News